ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ‘ಸ್ವದೇಶ್ ದರ್ಶನ್ ಯೋಜನೆ’ಯಿಂದಾಗಿ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತಿದೆ. ಹಲವಾರು ಆಧ್ಯಾತ್ಮ ತಾಣಗಳು ಅಭಿವೃದ್ಧಿಯಾಗುತ್ತಿವೆ.
ಈಶಾನ್ಯ ರಾಜ್ಯಗಳು, ಮೇಘಾಲಯದ ಆಧ್ಯಾತ್ಮ ಕೇಂದ್ರಗಳು, ಉತ್ತರಪ್ರದೇಶದ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಈ ಯೋಜನೆಯಡಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯು ರೂ.190.46 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ಅಷ್ಟೇ ಅಲ್ಲದೇ ಪ್ರಸಾದ್ ಯೋಜನೆಯಡಿ ಮಥುರಾದ ಗೋವರ್ಧನ, ಗುಜರಾತಿನ ಸೋಮನಾಥ ದೇವಾಲಯಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ವದೇಶ್ ದರ್ಶನ್ ಯೋಜನೆಯ ಈಶಾನ್ಯ ಭಾಗದಲ್ಲಿ ಪ್ರವಾಸೋದ್ಯಮ ಸಚಿವಾಲಯವು, ವೆಸ್ಟ್ ಖಾಸಿ ಹಿಲ್ಸ್, ಜೈಂತಿಯ ಹಿಲ್ಸ್, ಗಾರೋ ಹಿಲ್ಸ್ ನಾಕ್ರೆಕ್ ರಿಸರ್ವ್, ಕಟ್ಟ ಬೀಲ್, ಸಿಜುಗಳನ್ನು ರೂ.84.95 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ.
ಗೋರಖ್ಪುರದ ಗೋರಕ್ನಾಥ ದೇಗುಲ, ದೇವಿಪಟ್ಟಣ್ ದೇಗುಲ, ವಟವಾಶಿನಿ ದೇಗುಲಗಳನ್ನು ರೂ.21.16 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಿಸಿಟಿವಿ, ಟಾಯ್ಲೆಟ್, ಕಸದತೊಟ್ಟಿ, ವಸತಿ ಇತ್ಯಾದಿಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಪ್ರಸಾದ್ ಯೋಜನೆಯಡಿ ಸೋಮನಾಥ ಮತ್ತು ಗೋವರ್ಧನ್ಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವಾಲಯ ರೂ.39.74 ಕೋಟಿಗಳನ್ನು ಬಿಡುಗಡೆಗೊಳಿಸಿದೆ.
source: newsbharathi
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.