ನವದೆಹಲಿ: ವೀರ ಸನ್ಯಾಸಿ, ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವಿವೇಕಾನಂದರು ಕೋಟ್ಯಾಂತರ ಭಾರತೀಯರನ್ನು ಅದರಲ್ಲೂ ಮುಖ್ಯವಾಗಿ ಯುವ ಜನತೆಯನ್ನು ಹುರಿದುಂಬಿಸಿದರು, ಪ್ರೇರಣೆ ನೀಡಿದರು. ಬಲಿಷ್ಠ. ಅದ್ಭುತ, ಅಂತರ್ಗತ, ಜಾಗತಿಕ ನಾಯಕತ್ವ ವಹಿಸುವ ಭಾರತವನ್ನು ನಿರ್ಮಾಣ ಮಾಡುವುದಕ್ಕೆ ನಮಗೆ ಪ್ರೇರಣೆ ನೀಡಿದವರೇ ವಿವೇಕಾನಂದರು’ ಎಂದು ಟ್ವಿಟ್ ಮಾಡಿದ್ದಾರೆ.
ಅಲ್ಲದೇ, ವಿವೇಕಾನಂದರಿಗೆ ಸಂಬಂಧಿಸಿದ ಒಂದು ವೀಡಿಯೋವನ್ನೂ ಮೋದಿ ಹಂಚಿಕೊಂಡಿದ್ದು, ’ಏಳಿ, ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲಬೇಡಿ’ ಎಂಬ ಸ್ವಾಮೀಜಿಗಳ ಪ್ರಸಿದ್ಧ ಕರೆಯನ್ನು ಸ್ಮರಿಸಿಕೊಂಡಿದ್ದಾರೆ.
ವಿವೇಕಾನಂದರ ಶಕ್ತಿಯುತ ಮಾತುಗಳನ್ನು, ಅವರ ಶ್ರೀಮಂತ ಚಿಂತನೆಗಳನ್ನು ಅವರ ಜನ್ಮದಿನದ ಅಂಗವಾಗಿ ಸ್ಮರಿಸಿಕೊಳ್ಳುತ್ತೇನೆ. ಅವರು ಸೇವೆಯ ಆದರ್ಶಗಳಿಗೆ ಒತ್ತು ನೀಡಿದರು. ಯುವ ಶಕ್ತಿಯಲ್ಲಿ ಅವರ ನಂಬಿಕೆ ಅಖಂಡವಾಗಿತ್ತು ಎಂದಿದ್ದಾರೆ.
“Arise, awake and stop not till the goal is reached.”
Remembering these powerful words, and the rich thoughts of the venerable #SwamiVivekananda on his Jayanti.
He emphasised on the ideals of service and renunciation.
His belief in Yuva Shakti was unwavering. pic.twitter.com/Wbx9nBlGkP
— Narendra Modi (@narendramodi) January 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.