ನವದೆಹಲಿ: ಅಮ್ಮ ನಮಗೆ ಇನ್ನು ಐದು ನಿಮಿಷ ಆಡಲು ಬಿಡಿ ಎಂದು ಬಾಲ್ಯದಲ್ಲಿ ಅಮ್ಮನ ಬಳಿ ನಾವೆಲ್ಲಾ ಗೋಗರೆದಿದ್ದೇವೆ. ಆದರೆ ಆ ಸುಂದರ ಕ್ಷಣವನ್ನು ಹೇಳಿಕೊಳ್ಳಲು ನಮಗೆ ಯಾವುದೇ ವೇದಿಕೆ ಸಿಕ್ಕಿಲ್ಲ. ಆದರೆ ಈಗ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಬಾಲ್ಯದಲ್ಲಿ ಆಡುವಾಗ ಪೋಷಕರಿಗೆ ಇನ್ನೂ ಐದು ನಿಮಿಷ ಆಡಲು ಬಿಡಿ ಎಂದು ಮನವಿ ಮಾಡಿಕೊಂಡ ಸನ್ನಿವೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ.
ಖೇಲೋ ಇಂಡಿಯಾ ಚಳುವಳಿಯ ಭಾಗವಾಗಿ ರಾಥೋಡ್ ಅವರು ವಿಭಿನ್ನ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದು, ತಾನು ಎರಡೂ ಕೈಯಲ್ಲಿ ಟೇಬಲ್ ಟೆನ್ನಿಸ್ ಆಡುವ ವಿಡಿಯೋ ಬಿಟ್ಟಿದ್ದಾರೆ. ಪಕ್ಕದಲ್ಲಿ ಯಾರೋ ಅವರನ್ನು ಕರೆದಾಗ ‘5 ಮಿನಿಟ್ ಔರ್’ ಎನ್ನುತ್ತಾರೆ.
ಈ ವೀಡಿಯೋವನ್ನು ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್ ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್ ಮುಂತಾದವರಿಗೆ ಟ್ಯಾಗ್ ಮಾಡಿ, ತಮ್ಮ ’ಇನ್ನೂ ಐದು ನಿಮಿಷ’ ಸನ್ನಿವೇಶವನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
’ನಾವು ಆಟ ಆಡುವ ಸಮಯವನ್ನು ಪೋಷಕರು ನಿಗದಿಪಡಿಸುತ್ತಾರೆ. ಸಮಯ ಮುಗಿದ ಬಳಿಕ ಬನ್ನಿ ಹೋಂವರ್ಕ್ ಮಾಡಿ ಎಂದು ಕರೆಯುತ್ತಾರೆ. ಆಗ ನಾವು ಇನ್ನೂ ಐದು ನಿಮಿಷ ಆಡಲು ಬಿಡಿ ಎನ್ನುತ್ತೇವೆ. ಆಗ ನಮಗಾಗಿ ಮಾತನಾಡುವವರು ಯಾರೂ ಇರಲಿಲ್ಲ. ಆದರೀಗ ದೇಶದ ಮಕ್ಕಳ ಪರವಾಗಿ ಮಾತನಾಡುವ, ಅವರನ್ನು ಇನ್ನೂ ಐದು ನಿಮಿಷ ಆಡಲು ಬಿಡಿ ಎನ್ನುವ’ ಎಂದಿದ್ದಾರೆ.
source: www.newsbharati.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.