ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಚಿವ ವಿಕೆ ಸಿಂಗ್ ಅವರು ಮಹಾತ್ಮ ಗಾಂಧೀಜಿಯವರ ಅತ್ಯಂತ ನೆಚ್ಚಿನ ಭಜನೆ ‘ವೈಷ್ಣವೊ ಜನತೋ ತೇನೇ ಕಹಿಯೇ’ಯ ಕಾಫಿ ಟೇಬಲ್ ಬುಕ್ನ್ನು ಅನಾವರಣಗೊಳಿಸಿದರು.
ಅತ್ಯಂತ ಜನಪ್ರಿಯ ಭಜನೆಗೆ ತಮ್ಮ ಕಂಠದಾನ ಮಾಡಿದ ಜಗತ್ತಿನ 150 ಸಂಗೀತಗಾರರಿಗೆ ಧನ್ಯವಾದ ಸಮರ್ಪಣೆ ಮಾಡುವ ಉದ್ದೇಶದೊಂದಿಗೆ ಈ ಬುಕ್ನ್ನು ಹೊರತರಲಾಗಿದೆ. ಆ.9ರಂದು ಪ್ರವಾಸಿ ಭಾರತೀಯ ದಿವಸ್ನ ಅಂಗವಾಗಿ ಇದನ್ನು ಅನಾವರಣಗೊಳಿಸಲಾಗಿದೆ.
ಗಾಂಧೀಜಿಯವರ 150 ಜನ್ಮದಿನದ ಅಂಗವಾಗಿ 124 ದೇಶಗಳ ಪ್ರಸಿದ್ಧ ಸಂಗೀತಗಾರರು ‘ವೈಷ್ಣವೊ ಜನತೋ ತೇನೇ ಕಹಿಯೇ’ ಭಜನೆಯನ್ನು ಹಾಡಿ ಮಹಾತ್ಮನಿಗೆ ಗೌರವ ಸಮರ್ಪಿಸಿದ್ದರು.
1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಗಾಂಧಿಜಿಯವರು ಭಾರತಕ್ಕೆ ವಾಪಾಸ್ ಬಂದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ದೇಶದ ಚಿತ್ರಣವನ್ನೇ ಬದಲಾಯಿಸಿದ ದಿನವನ್ನು ಪ್ರತಿವರ್ಷ ಪ್ರವಾಸಿ ಭಾರತೀಯ ದಿವಸ್ ಆಗಿ ಆಚರಿಸಲಾಗುತ್ತದೆ.
source: www.newsbharati.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.