ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ ಕುಂಭಮೇಳಕ್ಕೆ ದೇಶ ವಿದೇಶಗಳ ಭಕ್ತರನ್ನು ಸ್ವಾಗತಿಸಲು ಸರ್ವ ರೀತಿಯಲ್ಲೂ ಸಜ್ಜಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು, ಕುಂಭಮೇಳಕ್ಕೆ ರೂ.2800 ಕೋಟಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಒಟ್ಟು 4300 ಕೋಟಿ ಖರ್ಚಾಗುವ ನಿರೀಕ್ಷೆ ಇದ್ದು, ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ.
ಕುಂಭಮೇಳಕ್ಕಾಗಿ ಪ್ರಯಾಗ್ರಾಜ್ ಸಮೀಪ ತಾತ್ಕಾಲಿಕ ನಗರವೊಂದು ನಿರ್ಮಾಣಗೊಂಡಿದ್ದು, 250 ಕಿಮೀ ಉದ್ದದ ರಸ್ತೆ, 22 ಸಣ್ಣ ಸೇತುವೆಗಳು ನಿರ್ಮಾಣವಾಗಿವೆ. ಮೂಲಗಳ ಪ್ರಕಾರ ಇದು, ವಿಶ್ವದ ಅತೀ ದೊಡ್ಡ ತಾತ್ಕಾಲಿಕ ನಗರ.
ಇನ್ನೊಂದೆಡೆ ಮಾನವಕುಲದ ಅತೀ ದೊಡ್ಡ ಸಮಾವೇಶ ಎಂದು ಕರೆಯಲ್ಪಡುವ ಕುಂಭಮೇಳವನ್ನು ಜಗಮಗಿಸಲು 40 ಸಾವಿರ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಏಕೀಕೃತ ಕಣ್ಗಾವಲು ವ್ಯವಸ್ಥೆ, ಕಮಾಂಡ್ ಸೆಂಟರ್ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 20 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕುಂಭಮೇಳಕ್ಕೆ ಆಗಮಿಸುವ ಭಕ್ತರು ತಮ್ಮೊಂದಿಗೆ ಗುರುತಿನ ಚೀಟಿಯನ್ನು, ಸಂಬಂಧಿಕರ ಮೊಬೈಲ್ ಸಂಖ್ಯೆ ಇಟ್ಟುಕೊಳ್ಳಬೇಕೆಂದು, ಇದರಿಂದ ತುರ್ತುಪರಿಸ್ಥಿಯಲ್ಲಿ ಸಹಾಯವಾಗುತ್ತದೆ ಎಂದು ಯುಪಿ ಡಿಐಜಿ ಕೆಪಿ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.