ಅಬುಧಾಬಿ: ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಥಾಯ್ಲೆಂಡ್ ವಿರುದ್ಧ ಅಭೂತಪೂರ್ವ ಗೆಲುವನ್ನು ಸಾಧಿಸಿದೆ.
ನಾಯಕ ಸುನೀಲ್ ಛೆಟ್ರಿಯವರ ಎರಡು ಗೋಲುಗಳ ಅಮೋಘ ಕೊಡುಗೆಯ ಮೂಲಕ ಭಾರತೀಯ ತಂಡ ಥಾಯ್ಲೆಂಡ್ ತಂಡವನ್ನು 4-1 ಗೋಲುಗಳ ಮೂಲಕ ಪರಾಭವಗೊಳಿಸಿತು. ಉದಯೋನ್ಮುಖ ಪ್ರತಿಭೆಗಳಾದ ಅನುರುದ್ಧ್ ಥಾಪಾ ಮತ್ತು ಜೇಜೇ ಲಾಲ್ ಪೆಖ್ಲುವಾ ಅವರು ತಲಾ ಒಂದು ಗೋಲುಗಳನ್ನು ಬಾರಿಸಿದರು.
ಜನವರಿ 10ರಂದು ನಡೆಯಲಿರುವ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ಯುಎಇ ತಂಡವನ್ನು ಎದುರಿಸಲಿದೆ. ಇದರಲ್ಲಿ ಜಯಿಸಿದರೆ ನಾಕೌಟ್ ಪ್ರವೇಶ ಖಚಿತವಾಗಲಿದೆ. ಮೂರನೇ ಸುತ್ತಿನ ಪಂದ್ಯ ಜ.14ರಂದು ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.