ನವದೆಹಲಿ: ಎಲ್ಲರಿಗೂ ಅಡುಗೆ ಅನಿಲ ಸಿಗುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಆರಂಭಗೊಂಡಿರುವ ‘ಉಜ್ವಲ ಯೋಜನೆ’ಯ ಫಲಾನುಭವಿಗಳ ಸಂಖ್ಯೆ 6 ಕೋಟಿಗೆ ಏರಿಕೆಯಾಗಿದೆ. 6 ಕೋಟಿ ಟಾರ್ಗೆಟ್ನ ಕೊನೆಯ ಫಲಾನುಭವಿಯಾದ ದೆಹಲಿಯ ಜಸ್ಮೀನ ಖಟೋನ್ ಎಂಬುವವರಿಗೆ ಎಲ್ಪಿಜಿ ಸಿಲಿಂಡರ್ನ್ನು ವಿತರಣೆ ಮಾಡಲಾಯಿತು.
ದೆಹಲಿಯ ಶಿವಪಾರ್ಕ್ನಲ್ಲಿ ನಡೆದ ಸಮಾರಂಭದಲ್ಲಿ 6 ಕೋಟಿ ಸಿಲಿಂಡರ್ ವಿತರಣಾ ಸಮಾರಂಭ ನಡೆದಿದ್ದು, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮುಂತಾದವರು ಭಾಗಿಯಾಗಿದ್ದರು. 6 ಕೋಟಿಯ ಟಾರ್ಗೆಟ್ ತಲುಪಿದ ಬೆನ್ನಲ್ಲೇ ಇದೀಗ ಟಾರ್ಗೆಟ್ನ್ನು 8 ಕೋಟಿಗೆ ವಿಸ್ತರಿಸಲಾಗಿದ್ದು, 2021 ರ ವೇಳೆಗೆ 8 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸುವ ಗುರಿ ಇದೆ.
ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಭಾರತ ಶೀಘ್ರದಲ್ಲೇ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ, ಪ್ರಧಾನಮಂತ್ರಿ ಉಜ್ವಲ ಯೋಜನೆ ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಿದೆ ಎಂದರು.
2016ರ ಮೇ 1ರಂದು ಮೋದಿ ಉಜ್ವಲ ಯೋಜನೆಗೆ ಚಾಲನೆಯನ್ನು ನೀಡಿದ್ದರು. 3 ವರ್ಷದಲ್ಲಿ 5 ಕೋಟಿ ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸುವ ಗುರಿಯನ್ನು ಇಡಲಾಗಿತ್ತು. ಆದರೆ ಟಾರ್ಗೆಟ್ಗೂ ಮುನ್ನವೇ 2018ರ ಎಪ್ರಿಲ್ನಲ್ಲಿ 5 ಕೋಟಿ ಮನೆಗಳಿಗೆ ಎಲ್ಪಿಜಿ ದೊರೆತಿತ್ತು. ಮತ್ತೆ ಆ ಯೋಜನೆಯನ್ನು ವಿಸ್ತರಣೆ ಮಾಡಿದ ಸರ್ಕಾರ ಈ 6 ಕೋಟಿ ಮನೆಗಳಿಗೆ ಅಡುಗೆ ಅನಿಲವನ್ನು ನೀಡುವಲ್ಲಿ ಯಶಸ್ವಿಯಾಗಿದೆ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.