ಬೆಂಗಳೂರು: ಹೊಸವರ್ಷ ಬಂತೆಂದರೆ ಸಾಕು ಮೋಜು ಮಸ್ತಿಯಲ್ಲೇ ಹೆಚ್ಚಿನವರು ಕಾಲ ಕಳೆಯುತ್ತಾರೆ. ಆದರೆ ಒಂದಿಷ್ಟು ಮಂದಿ, ಉತ್ತಮ ಕಾರ್ಯವನ್ನು ಮಾಡುವ ಮೂಲಕ ಹೊಸತನ್ನು ಸ್ವಾಗತಿಸಲು ಮುಂದಾಗುತ್ತಾರೆ. ಅಂತಹವರಲ್ಲಿ, ರಾಷ್ಟ್ರೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕೂಡ ಒಬ್ಬರು. ಹೊಸ ವರ್ಷದ ಮಧ್ಯರಾತ್ರಿ ಬೆಂಗಳೂರು ಮಹಾನಗರದಲ್ಲಿ ಬೀದಿಯಲ್ಲಿ ಮಲಗಿದ್ದ ವಸತಿ ರಹಿತ ಜನರಿಗೆ ಆಹಾರ ಮತ್ತು ಕಂಬಳಿಗಳನ್ನು ಹಂಚಿಕೆ ಮಾಡಿದ್ದಾರೆ.
30 ವರ್ಷದ ನಾಯ್ಕ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಧ ಕ್ರಿಕೆಟಿಗ. ಕಲಾಸಿಪಾಳ್ಯ-ಕೆಆರ್ ಮಾರ್ಕೆಟ್ ರಸ್ತೆ ಬದಿಯಲ್ಲಿ, ಫ್ಲೈಓವರ್ ಕೆಳಗೆ ಮಲಗಿದ್ದ ನೂರಾರು ಕೂಲಿ ಕಾರ್ಮಿಕರು, ಬಡವರಿಗೆ ಇವರು ಆಹಾರ, ಕಂಬಳಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕರಿಗಿಂತ ಭಿನ್ನವಾಗಿ ನಿಂತಿದ್ದಾರೆ.
ಇವರು ಹುಟ್ಟು ಅಂಧನಾಗಿದ್ದರು, 1994ರಲ್ಲಿ ಇವರ ತಾಯಿಯ ಪ್ರಯತ್ನದಿಂದ ಇವರಿಗೆ ಅರ್ಧದಷ್ಟು ದೃಷ್ಟಿ ಬಂದಿತ್ತು. ಅತೀ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸಿದ್ದ ನಾಯ್ಕ್ ಅವರಿಗೆ, ಬಡವರ ಹಸಿವು ಮತ್ತು ಚಳಿಯ ಬಗ್ಗೆ ತಿಳಿದಿದೆ. ಅದೇ ಕಾರಣಕ್ಕೆ ಹೊಸ ವರ್ಷವನ್ನು ನೆಪವನ್ನಾಗಿಸಿ, ಬಡವರಿಗೆ ನೆರವಾಗುವ ಕಾರ್ಯ ಮಾಡಿದ್ದಾರೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.