ನವದೆಹಲಿ: ಬಿಜೆಪಿಗೆ ಜನರ ಮೇಲೆ ನಂಬಿಕೆ ಇದೆ ಮತ್ತು ಜನರಿಗೆ ಬಿಜೆಪಿ ಮೇಲೆ ನಂಬಿಕೆ ಇದೆ. ಹೀಗಾಗಿ ಈ ವರ್ಷವೂ ಬಿಜೆಪಿ ಅಭೂತಪೂರ್ವ ಯಶಸ್ಸನ್ನು ಗಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘2019ರಲ್ಲೂ ಜನರ ನಂಬಿಕೆಗೆ ಪಾತ್ರವಾಗಿರುವ ಪಕ್ಷವೊಂದಿದ್ದರೆ ಅದು ಬಿಜೆಪಿ, ಜನರೊಂದಿಗೆ ಬೆಸೆದುಕೊಂಡಿರುವ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ. ಈ ವರ್ಷ ಜನತಾ ವರ್ಸಸ್ ಘಟಬಂಧನ್ ವಿರುದ್ಧ ಸ್ಪರ್ಧೆ ಏರ್ಪಡಲಿದೆ’ ಎಂದರು.
ಇತ್ತೀಚಿನ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಮಾತನಾಡಿದ ಅವರು, ‘ಈ ಮೂರು ರಾಜ್ಯಗಳಲ್ಲಿ ನಾವು ಹಲವಾರು ವರ್ಷಗಳಿಂದ ಅಧಿಕಾರದಲ್ಲಿದ್ದೇವೆ. ಎರಡು ರಾಜ್ಯಗಳಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬಂದಿದೆ. ಛತ್ತೀಸ್ಗಢದಲ್ಲಿ ಮಾತ್ರ ನಾವು ಸೋತಿದ್ದೇವೆ. ಈ ಸೋಲಿನ ಬಗ್ಗೆ ನಾವು ಪರಾಮರ್ಶೆ ಮಾಡುತ್ತೇವೆ’ ಎಂದಿದ್ದಾರೆ.
ರಾಷ್ಟ್ರೀಯ ಚುನಾವಣೆಯಲ್ಲಿ ದೇಶದ ಜನ ಬಿಜೆಪಿ ಮೇಲೆ ನಂಬಿಕೆ ಇಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳು ಮೋದಿ ಅಲೆ, ಮೋದಿ ಮ್ಯಾಜಿಕ್ ಹೊರಟು ಹೋಗಿದ ಎಂದು ಹೇಳುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕನಿಷ್ಠ ಪಕ್ಷ ಈಗಲಾದರೂ ಅವರು ಮೋದಿ ಅಲೆ, ಮೋದಿ ಮ್ಯಾಜಿಕ್ ಇತ್ತು ಎಂಬುದನ್ನು ಒಪ್ಪಿಕೊಂಡಂತಾಯಿತ್ತಲ್ಲವೇ’ ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳಲಿ. ಆ ಬಳಿಕವೇ ನಾವು ಸರ್ಕಾರವಾಗಿ ನಮ್ಮ ಜವಾಬ್ದಾರಿ ಏನಿದೆಯೋ ಅದನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಗೆ ಸರ್ಕಾರದಿಂದ ಯಾವುದೇ ಒತ್ತಡವಿರಲಿಲ್ಲ. 5-6 ತಿಂಗಳ ಹಿಂದೆಯೇ ಪತ್ರ ಬರೆದು ರಾಜೀನಾಮೆ ನೀಡಬೇಕೆಂದಿದ್ದೇನೆ ಎಂದು ತಿಳಿಸಿದ್ದರು. ಈ ಮಾಹಿತಿಯನ್ನು ನಾನು ಇದೇ ಮೊದಲ ಬಾಋಇಗೆ ಬಹಿರಂಗಪಡಿಸುತ್ತಿದ್ದೇನೆ ಎಂದರು.
ಅಲ್ಲದೇ, ನೋಟ್ ಬ್ಯಾನ್ ಕ್ರಮ ಏಕಾಏಕಿ ನಡೆಸಿದ್ದಲ್ಲ, ಜನರಿಗೆ ಕಪ್ಪು ಹಣ ಠೇವಣಿ ಇಡುವ ಬಗ್ಗೆ ಮೊದಲೇ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.