ಅಹ್ಮದಾಬಾದ್: ಇನ್ನು ಮುಂದೆ ಗುಜರಾತ್ನ ಶಾಲಾ ಮಕ್ಕಳು ಹಾಜರಾತಿ ಕರೆಯುವ ವೇಳೆ ಎಸ್ ಸರ್ ಅಥವಾ ಎಸ್ ಮೇಡಂ ಎನ್ನುವ ಬದಲು, ಜೈ ಹಿಂದ್ ಅಥವಾ ಜೈ ಭಾರತ್ ಎನ್ನಲಿದ್ದಾರೆ.
2019ರ ಕ್ಯಾಲೆಂಡರ್ ವರ್ಷದಿಂದಲೇ ಈ ನಿಯಮ ಅಲ್ಲಿನ ಶಾಲೆಗಳಲ್ಲಿ ಅನುಷ್ಠಾನಕ್ಕೆ ಬಂದಿದೆ. ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮಿಕ ಶಿಕ್ಷಣ ಮಂಡಳಿಯ ನಿರ್ದೇಶಕರು ಈ ಬಗೆಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹ ಚೂಡಸಮ ಅವರ ಆದೇಶದಂತೆ ಈ ನಿಯಮವನ್ನು ಶಿಕ್ಷಣ ಮಂಡಳಿ ಜಾರಿಗೆ ತಂದಿದೆ.
1ರಿಂದ 12ನೇ ತರಗತಿವರೆಗಿನ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ಹಾಜರಾತಿ ವೇಳೆ ಮಕ್ಕಳು ’ಜೈ ಹಿಂದ್’ ಅಥವಾ ’ಜೈ ಭಾರತ್’ ಅನ್ನಬೇಕಿದೆ.
ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವುದು ಈ ಈ ನಿಯಮದ ಹಿಂದಿನ ಉದ್ದೇಶವಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.