ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ಪಶ್ಚಿಮಬಂಗಾಳಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅಲ್ಲಿ ಪ್ರಚಾರ ಕಾರ್ಯದ ಜವಾಬ್ದಾರಿ ನೋಡಿಕೊಳ್ಳಲು 20 ಸದಸ್ಯರ ನಿಯೋಗವನ್ನು ಕಳುಹಿಸುತ್ತಿದೆ. ರಾಜ್ಯಸಭಾ ಸಂಸದ ಎಂ.ಪಿ ಭೂಪೇಂದ್ರ ಯಾದವ್ ಅವರು ಈ ನಿಯೋಗದ ನೇತೃತ್ವ ವಹಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.
ಮೀಡಿಯಾ ಸೆಲ್, ಐಟಿ ಸೆಲ್ಗಳನ್ನೂ ಒಳಗೊಂಡ 20 ಸದಸ್ಯರ ನಿಯೋಗ ಶನಿವಾರವೇ ಕೋಲ್ಕತ್ತಾ ತಲುಪಲಿದೆ. ಐಐಟಿ ಖರಗ್ಪುರ, ಹೈದರಾಬಾದ್, ಪೊವಯ್, ಚೆನ್ನೈಗಳಲ್ಲಿನ ವಿದ್ಯಾರ್ಥಿಗಳು ಕೂಡ ಈ ಟೀಮ್ನಲ್ಲಿದ್ದಾರೆ. ಐಐಟಿ ವಿದ್ಯಾರ್ಥಿಗಳು ಐಟಿ ಮತ್ತು ಕಾಲ್ ಸೆಂಟರ್ ತಜ್ಞರಾಗಿದ್ದಾರೆ ಎನ್ನಲಾಗಿದೆ.
ಪಶ್ಚಿಮಬಂಗಾಳದ 42 ಲೋಕಸಭಾ ಸ್ಥಾನಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಭೂಪೇಂದ್ರ ಸಿಂಗ್ ಅವರಿಗೆ ಸೂಚಿಸಲಾಗಿದೆ. ಈ ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುವ ಸಂಭಾವ್ಯತೆ ಬಿಜೆಪಿಗೆ ಇದೆ ಎಂದು ತಿಳಿದುಕೊಳ್ಳಲು ಶಾ ಬಯಸುತ್ತಿದ್ದಾರೆ, ಎಲ್ಲಿ ಪಕ್ಷ ದುರ್ಬಲವಾಗಿದೆ ಮತ್ತು ಎಲ್ಲಿ ಬಲಿಷ್ಠವಾಗಿದೆ ಎಂಬ ಮಾಹಿತಿಯನ್ನು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪಶ್ಚಿಬಂಗಾಳದಲ್ಲಿ ರಥಯಾತ್ರೆಯನ್ನು ನಡೆಸಲು ಬಿಜೆಪಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅದು ಅನುಮತಿ ಕೊಟ್ಟರೆ ಶೀಘ್ರವೇ ಅಲ್ಲಿ ರಥಯಾತ್ರೆಗಳನ್ನೂ ಬಿಜೆಪಿ ನಡೆಸಲಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.