ರಾಂಚಿ: ಝಾರ್ಖಂಡ್ ರಾಜ್ಯದ ಧನಬಾದ್ನಲ್ಲಿ ಡಿ.28ರಿಂದ ಡಿ.30ರವರೆಗೆ ಕ್ರೀಡಾ ಭಾರತಿಯ ರಾಷ್ಟ್ರೀಯ ಅಧಿವೇಶನವನ್ನು ಆಯೋಜನೆಗೊಳಿಸಲಾಗಿದೆ. ಅಧಿವೇಶನಕ್ಕಾಗಿ ಈಗಾಗಲೇ ಧನಬಾದ್ ಸಂಪೂರ್ಣ ಸಜ್ಜುಗೊಂಡಿದೆ.
ಗುರುವಾರ ಅಖಿಲ ಭಾರತೀಯ ನಿಯಮಕ್ ಮಂಡಲ್ ಮತ್ತು ಕಾರ್ಯಾಕಾರಿಣಿ ಸಭೆಯನ್ನು ನಡೆಸುವ ಮೂಲಕ ಅಧಿವೇಶನಕ್ಕೆ ಔಪಚಾರಿಕ ಚಾಲನೆಯನ್ನು ನೀಡಲಾಗಿದೆ. ಈ ಸಭೆಯಲ್ಲಿ ಕ್ರೀಡಾ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಯುಪಿ ಕ್ರೀಡಾ ಸಚಿವ ಚೇತನ್ ಚೌವ್ಹಾಣ್ ಅವರು ಭಾಗಿಯಾದರು.
ಶುಕ್ರವಾರ ಉದ್ಘಾಟನಾ ಸಮಾರಂಭದ ಬಳಿಕ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ಮಾತನಾಡಲಿದ್ದಾರೆ.
source: www.jagran.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.