ತಿರುವನಂತಪುರಂ: ಕೇರಳ ಸರ್ಕಾರ ನಡೆಸಲು ಉದ್ದೇಶಿಸಿರುವ ‘ವನಿತಾ ಮಂದಿಲ್’ ಕಾರ್ಯಕ್ರಮವನ್ನು ವಿರೋಧಿಸಿ, ಶಬರಿಮಲಾ ಕರ್ಮ ಸಮಿತಿಯು ಇಂದು ಕೇರಳದಾದ್ಯಂತ ಅಯ್ಯಪ್ಪ ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬಿಜೆಪಿ ಮತ್ತು ಎನ್ಎಸ್ಎಸ್ ಬೆಂಬಲದೊಂದಿಗೆ ಬುಧವಾರ ಸಂಜೆ 6 ಗಂಟೆಯಿಂದ ದೀಪ ಬೆಳಗಿಸುವ ಕಾರ್ಯಕ್ರಮ ಜರುಗಲಿದೆ. ಪ್ರತಿ 2.5 ಕಿಲೋಮೀಟರ್ಗಳಿಗೊಂದು ದೀಪವನ್ನು ಹಚ್ಚಲಾಗುತ್ತದೆ. ಭಕ್ತರು ಅಲ್ಲಿ ಅಯ್ಯಪ್ಪ ಜಪ ಮಾಡಲಿದ್ದಾರೆ. ಕಾಸರಗೋಡಿನ ಹೊಸಂಗಡಿ ಧರ್ಮಶಾಸ್ತ ಕ್ಷೇತ್ರದಿಂದ ಆರಂಭಗೊಂಡು ಕನ್ಯಾಕುಮಾರಿ ತ್ರಿವೇಣಿಯ ಕಳಿಯಿಕ್ಕಾವಿಳದವರೆಗೆ ದೀಪವನ್ನು ಬೆಳಗಿಸಲಾಗುತ್ತಿದ್ದು, 10 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಷ್ಟ್ರೀಯ ಹೆದ್ದಾರಿ, ಎಂಜಿ ರಸ್ತೆಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತಿದೆ.
ಅರಿವಿನ ಜ್ಞಾನವನ್ನು ಬೆಳಗಿಸುವ ಉದ್ದೇಶದೊಂದಿಗೆ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕೇವಲ 30 ನಿಮಿಷದ ಕಾರ್ಯಕ್ರಮ ಇದಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ಜನವರಿ 1ರಂದು ಪಿನರಾಯಿ ಸರ್ಕಾರ ‘ವನಿತಾ ಮಂದಿನಿ’ಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ನವೋತ್ಥಾನ ಮೌಲ್ಯಗಳ ರಕ್ಷಣೆ ಉದ್ದೇಶದಿಂದ ಇದನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದೆ. ಶಬರಿಮಲೆಗೆ ಮಹಿಳಾ ಪ್ರವೇಶದ ಪರವಾದ ನಿಲುವನ್ನು ಇದರ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನು ಕಟುವಾಗಿ ವಿರೋಧಿಸಿರುವ ಅಯ್ಯಪ್ಪ ಭಕ್ತರು, ಅಯ್ಯಪ್ಪ ಜ್ಯೋತಿ ಬೆಳಗಿಸುತ್ತಿದ್ದಾರೆ.
source: www.newindianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.