ಶ್ರೀನಗರ: ಜಮ್ಮು ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ವೈಷ್ಣೋದೇವಿ ದೇಗುಲ ಮತ್ತು ಭೈರವ್ನಾಥ್ ದೇಗುಲವನ್ನು ಸಂಪರ್ಕಿಸುವ ರೋಪ್ವೇಗೆ ಚಾಲನೆ ದೊರಕಿದೆ. ಇದರಿಂದಾಗಿ ಭಕ್ತರು ಅತ್ಯಂತ ಸರಳವಾಗಿ ಯಾತ್ರೆ ಮಾಡಬಹುದಾಗಿದೆ.
ವೈಷ್ಣೋ ದೇವಿಯಿಂದ ಭೈರವ್ನಾಥ್ ದೇಗುಲ ಕೇವಲ 1.5 ಕಿಲೋಮೀಟರ್ ದೂರವಿದೆ. ಆದರೆ ಹಾದಿ ಅತ್ಯಂತ ಕಠಿಣ, ಅಪಾಯಕಾರಿಯಾದ ಹಿನ್ನಲೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಭಕ್ತರಿಗೆ ಹರಸಾಹಸವಾಗುತ್ತಿತ್ತು. ಹೀಗಾಗಿ ವೈಷ್ಣೋದೇವಿಗೆ ಆಗಮಿಸುವ ಕೇವಲ ಶೇ.30-40ರಷ್ಟು ಭಕ್ತರು ಮಾತ್ರ ಇಲ್ಲಿಗೆ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಇನ್ನು ಮುಂದೆ ರೋಪ್ ವೇ ಬಳಸಿ ಸುಲಭವಾಗಿ ಭೈರವನಾಥನ ದರ್ಶನ ಪಡೆಯಬಹುದಾಗಿದೆ.
ರೋಪ್ವೇ ಮೂಲಕ ಭಕ್ತರು ವೈಷ್ಣೋದೇವಿಯಿಂದ ಕೇವಲ ಐದು ನಿಮಿಷದಲ್ಲಿ ಭೈರವನಾಥಗೆ ತೆರಳಬಹುದು. ಇದಕ್ಕೆ ವೆಚ್ಚ ಒಬ್ಬರಿಗೆ 100 ರೂಪಾಯಿ. ಭಾನುವಾರ ಪ್ರಾಯೋಗಿಕವಾಗಿ ರೋಪ್ ವೇ ಪರೀಕ್ಷೆ ನಡೆಸಲಾಗಿದ್ದು, ಅತ್ಯಂತ ಯಶಸ್ಸಿಯಾಗಿದೆ.
ಜ.ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ರೋಪ್ವೇಗೆ ಚಾಲನೆಯನ್ನು ನೀಡಿದ್ದಾರೆ. ರೋಪ್ವೇಗೆ ಬೇಕಾದ ಪರಿಕರಗಳನ್ನು ಸ್ವಿಟ್ಜರ್ಲ್ಯಾಂಡ್ನಿಂದ ತರಿಸಿಕೊಳ್ಳಲಾಗಿದೆ. ಗಂಟೆಗೆ 800 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಇದಕ್ಕಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.