ಮೀರತ್: ಮೀರತ್ನಿಂದ 25 ಕಿಲೋಮೀಟರ್ ದೂರವಿರುವ ಗ್ರಾಮೀಣ ಭಾಗ ಮೋದಿನಗರ್ನಲ್ಲಿ ವಾಸಿಸುತ್ತಿರುವ ಪದವೀಧರೆ ಅಮಿತಾ ಶರ್ಮಾ ಅವರು, ತಮ್ಮ ಪತಿ ಸಂಜಯ್ ಅವರೊಂದಿಗೆ ಸೇರಿ ಎಲ್ಲರಿಗೂ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ. ಲೈಬ್ರರಿ ಸ್ಟಾರ್ಟ್ಅಪ್ನ್ನು ಆರಂಭಿಸಿರುವ ಈ ದಂಪತಿ, ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕವನ್ನು ನೀಡುತ್ತಿದ್ದಾರೆ.
ಎರಡು ವರ್ಷಗಳ ಈ ದಂಪತಿ ಆರಂಭಿಸಿದ ’ಪ್ರೇರಣಾ ಬುಕ್ ಬ್ಯಾಂಕ್’ ಈ ನಾಲ್ಕು ರಾಜ್ಯಗಳನ್ನು ವ್ಯಾಪಿಸಿದೆ. 44ಕ್ಕೂ ಅಧಿಕ ಗ್ರಾಮೀಣ ಭಾಗದಲ್ಲಿ ಜ್ಞಾನ ವೃದ್ಧಿಸುವ ಕಾರ್ಯ ಮಾಡುತ್ತಿದೆ.
ಶಾಲೆ ಶಾಲೆಗಳಿಗೆ ತೆರಳಿ, ಅಗತ್ಯವಿಲ್ಲದ, ಹೆಚ್ಚುವರಿ ಪುಸ್ತಕಗಳನ್ನು ನೀಡುವಂತೆ ಈ ದಂಪತಿ ಮನವಿ ಮಾಡುತ್ತಾರೆ. ಪುಸ್ತಕಗಳನ್ನು ದಾನ ಮಾಡುವಂತೆ ವಿದ್ಯಾರ್ಥಿಗಳನ್ನು, ಪೋಷಕರನ್ನು, ಶಿಕ್ಷಕರನ್ನು ಉತ್ತೇಜಿಸುತ್ತಾರೆ. ಅವರಿಂದ ಪಡೆದ ಪುಸ್ತಕವನ್ನು ಅಗತ್ಯವಿರುವ ಬಡ ಮಕ್ಕಳಿಗೆ ಉಚಿತವಾಗಿ ಎರವಲು ನೀಡುತ್ತಾರೆ.
ಇವರ ಇಡೀ ಸೇವೆ ಉಚಿತವಾಗಿದ್ದು, ಪುಸ್ತಕಗಳ ಲಭ್ಯತೆಯೇ ಇಲ್ಲದ ಗ್ರಾಮೀಣ ಬಡ ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾಗಿದೆ. ಈ ಬುಕ್ ಬ್ಯಾಂಕ್ ಪ್ರಸ್ತುತ 4,500೦ ಸ್ವಯಂಸೇವಕರನ್ನು ಹೊಂದಿದ್ದು, ಇವರೆಲ್ಲ ಪುಸ್ತಕವನ್ನು ಬ್ಯಾಂಕ್ಗೆ ಒದಗಿಸುವಲ್ಲಿ, ಅದನ್ನು ವಿದ್ಯಾರ್ಥಿಗಳಿಗೆ ಎರವಲು ನೀಡುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಎರಡು ವರ್ಷದಲ್ಲಿ ಸುಮಾರು 2ಲಕ್ಷ ಪುಸ್ತಕಗಳು ಈ ಬುಕ್ ಬ್ಯಾಂಕ್ಗೆ ಬಂದಿವೆ.
ಇದೀಗ ಘಾಜಿಯಾಬಾದ್ನಲ್ಲಿ 15, ಮೀರತ್ನಲ್ಲಿ 18, ಉತ್ತರಾಖಂಡದಲ್ಲಿ 3, ದೆಹಲಿಯಲ್ಲಿ 4, ಹರಿಯಾಣದಲ್ಲಿ 1 ಪ್ರೇರಣಾ ಬುಕ್ ಲೈಬ್ರರಿ ಸ್ಥಾಪನೆಗೊಂಡಿದೆ. ಇಲ್ಲಿ ಎಲ್ಲಾ ಸೇವೆಯು ಉಚಿತವಾಗಿದೆ ಎಂಬುದು ವಿಶೇಷ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.