ಮುಂಬಯಿ: 2005ರ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 22 ಮಂದಿಯನ್ನೂ ಮುಂಬಯಿನ ವಿಶೇಷ ಸಿಬಿಐ ಕೋರ್ಟ್ ಶುಕ್ರವಾರ ಆರೋಪದಿಂದ ಖುಲಾಸೆಗೊಳಿಸಿದೆ. ಅಲ್ಲದೇ, ಈ ಎನ್ಕೌಂಟರ್ ನಕಲಿ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದೆ.
ಬಹುತೇಕ ಆರೋಪಿಗಳು ರಾಜಸ್ಥಾನ ಮತ್ತು ಗುಜರಾತಿನ ಪೊಲೀಸ್ ಅಧಿಕಾರಿಗಳಾಗಿದ್ದು, ಇವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಆರೋಪದಿಂದ ಮುಕ್ತಗೊಳಿಸಲಾಗಿದೆ.
ಈ ಎನ್ಕೌಂಟರ್ ಕೊಲೆ ಮತ್ತು ಪಿತೂರಿ ಎಂಬುದಾಗಿ ತನಿಖೆ ನಡೆಸಿದ್ದ ಸಿಬಿಐ ಹೇಳಿತ್ತು. 38 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬಿಜೆಪಿ ರಾಷ್ಟ್ರ್ಯಾಧ್ಯಕ್ಷ ಅಮಿತ್ ಶಾ ಕೂಡ ಇದರಲ್ಲಿ ಒಬ್ಬರಾಗಿದ್ದರು. ಬಳಿಕ ಶಾ ಸೇರಿದಂತೆ 16 ಮಂದಿ ಆರೋಪ ಮುಕ್ತರಾಗಿದ್ದರು.
ಲಷ್ಕರ್ ಇ ತೋಯ್ಬಾ ಸಂಘಟನೆಯೊಂದಿಗೆ ಸೊಹ್ರಾಬುದ್ದೀನ್ಗೆ ಸಂಪರ್ಕವಿತ್ತು, ಆತ ಮೋದಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಎನ್ಕೌಂಟರ್ ನಡೆಸಿದ ಪೊಲೀಸರ ವಾದವಾಗಿತ್ತು. ಎನ್ಕೌಂಟರ್ನಲ್ಲಿ ಆತನ ಪತ್ನಿ ಕೌಸರ್ ಬಿ ಮತ್ತು ಆಪ್ತ ತುಳಸಿರಾಮ್ ಪ್ರಜಾಪತಿ ಕೂಡ ಹತನಾಗಿದ್ದ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.