ನವದೆಹಲಿ: ಪ್ರಜಾಪ್ರಭುತ್ವದ ಶಕ್ತಿ ಕೇವಲ ಮತದಾನ ಮಾಡುವುದು ಮಾತ್ರವಲ್ಲ, ಜನರನ್ನು ಜೊತೆಗೂಡಿಸಿಕೊಂಡು ಸರ್ಕಾರ ನಡೆಸುವುದು ಕೂಡ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಜರುಗಿದ ವೈಪಿಓ ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳು ಮತ್ತು ಕಾರ್ಪೋರೇಟ್ಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ‘ಉತ್ತಮ ನಾಳೆಗಾಗಿ ಪರಿಣಾಮಕಾರಿ ನಾಯಕತ್ವ’ ಎಂಬ ಥೀಮ್ನೊಂದಿಗೆ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿತ್ತು.
ಭಯೋತ್ಪಾದನೆಯ ವಿಷಯದತ್ತ ಜಗತ್ತಿನ ಗನಮವನ್ನು ಸೆಳೆಯಲು ಭಾರತ ಯಶಸ್ವಿಯಾಗಿದೆ. ಭಾರತದ ಅನಿಸಿಕೆಯನ್ನು ಇಂದು ಜಗತ್ತು ಗಂಭೀರವಾಗಿ ಪರಿಗಣಿಸುತ್ತಿದೆ. ಅನಿವಾಸಿ ಭಾರತೀಯರು ನಮ್ಮ ಶಕ್ತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಭಾರತದ ಸಾಧನೆಯನ್ನು ತೋರಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ ಎಂದರು.
ಆಡಳಿತ ಕಾಲದೊಂದಿಗೆ ಬಲದಾಗುತ್ತಿರಬೇಕು, ಸಕಾರಾತ್ಮಕ ಪರಿವರ್ತನೆಗಾಗಿ ಉತ್ತಮ ಆಡಳಿತ ಅತ್ಯವಶ್ಯಕವಾಗಿದೆ. ನೀತಿ ನಿಯಮಗಳನ್ನು ರೂಪಿಸುವುದು ಮಾತ್ರವಲ್ಲ, ಅವುಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವುದು ಕೂಡ ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.