“ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ನಾವು ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು. ಸರ್ಕಾರಿ ಪಡೆಗಳು ಎಂದಿಗೂ ವಿದ್ಯಾರ್ಥಿಗಳೆಡೆಗೆ ಮೃದು ಧೋರಣೆ ಹೊಂದಿರುತ್ತವೆ. ಇದೇ ಮುಂದೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ಕಾರವನ್ನು ಅನನುಕೂಲ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಈ ರೀತಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಸಹಕರಿಸಲು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಪ್ರತಿಭಟನೆಗಳಿಗೆ ಹಣದ ಸಹಾಯವನ್ನೂ ಮಾಡಲು ಒಪ್ಪಿಕೊಂಡಿದ್ದಾರೆ, ಈ ಕುರಿತು ನಮ್ಮ ಸ್ನೇಹಿತನನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು (ಕಾಂಗ್ರೆಸ್ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ).”
ಇದು ಇತ್ತೀಚಿಗೆ ಮಾವೋವಾದಿ ಭಯೋತ್ಪಾದಕರ ಬೆಂಬಲಿಗರ ಮನೆಗಳ ಮೇಲೆ ನಡೆದ ದಾಳಿಯ ವೇಳೆ ದೊರೆತ ಪತ್ರವೊಂದೆನ್ನಲಾದದ್ದರಲ್ಲಿರುವ ಸಾರಾಂಶ.
ಇದು ಭಯೋತ್ಪಾದಕರು ತಮ್ಮ ಕೃತ್ಯಗಳಿಗೆ ಬೆಂಬಲವಾಗಿ ಮಹಿಳೆಯರನ್ನು, ಮಕ್ಕಳನ್ನು, ವಿದ್ಯಾರ್ಥಿಗಳನ್ನು ಮತ್ತು ದೇಶದ ಸಾಮಾನ್ಯ ನಾಗರಿಕರನ್ನು ಬಳಸಿಕೊಂಡು ಅವರನ್ನೇ ಮುಂದೆ ಬಿಟ್ಟು ತಮ್ಮ ಕೆಲಸ ಸಾಧಿಸಿಕೊಳ್ಳುವುದರ ಹಿಂದಿನ ಕಾರ್ಯತಂತ್ರಕ್ಕೊಂದು ಸ್ಪಷ್ಟ ಉದಾಹರಣೆ. ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದನೆ ಕೂಡಾ ಇದೇ ಮಾದರಿಯದ್ದು. ಅಲ್ಲಿ ಹಿಂದಿನಿಂದಲೂ ಭಯೋತ್ಪಾದಕರು ಕಾಲೇಜು ವಿದ್ಯಾರ್ಥಿಗಳನ್ನು, ಮಹಿಳೆಯರನ್ನು ಮತ್ತು ಸಾಮಾನ್ಯ ನಾಗರೀಕರನ್ನು ಗುರಾಣಿಯಂತೆ ಬಳಸಿಕೊಳ್ಳುವ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು. ಸೈನಿಕರು ಭಯೋತ್ಪಾದಕರನ್ನು ಬಂಧಿಸಲು ಮುಂದಾದರೆ ಅವರೇ ನೇಮಿಸಿದ ಸಾಮಾನ್ಯ ನಾಗರಿಕರು, ನಿರುದ್ಯೋಗಿ ಯುವಕರು ಆ ಸೈನಿಕರಿಗೆ ತಡೆಯೊಡ್ಡುತ್ತಿದ್ದರು. ಆ ಸೈನಿಕರ ಮೇಲೆ ಕಲ್ಲು ತೂರುತ್ತಿದ್ದರು. ಸೈನಿಕರು ಅವರನ್ನು ಚದುರಿಸಲು ಪ್ರಯತ್ನ ಪಡುತ್ತಿರುವಾಗ ಆ ಭಯೋತ್ಪಾದಕರು ಸುಲಭವಾಗಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿದ್ದರು. ಒಂದು ವೇಳೆ ಸೈನಿಕರು ಆ ಭಯೋತ್ಪಾದಕರನ್ನು ಪಾರು ಮಾಡುವ ಸಲುವಾಗಿ ತಮ್ಮ ಮೇಲೆ ಕಲ್ಲೆಸೆಯುವವರ ಮೇಲೆ ಲಾಠಿ ಬೀಸಿದರೆ, ಪೆಲೆಟ್ ಗನ್ ಬಳಸಿ ಚದುರಿಸಲು ಪ್ರಯತ್ನಿಸಿದರೆ, ಅವರ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು ಪ್ರತಿಭಟನೆಗಿಳಿಯುತ್ತಿದ್ದವು. ಭಾರತದಲ್ಲಿ ಮಾನವ ಹಕ್ಕುಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದವು. ಪ್ರತಿಷ್ಠಿತ ಆಂಗ್ಲ ಪತ್ರಿಕೆಗಳು ಅದನ್ನೇ ದೊಡ್ಡ ಸುದ್ದಿಯನ್ನಾಗಿ ಪ್ರಕಟಿಸುತ್ತಿದ್ದವು.
ಆದರೆ ಎಲ್ಲಕ್ಕೂ ಒಂದು ಅಂತ್ಯವಿರಲೇಬೇಕು. ಇದೀಗ ಭಾರತ ವಿಶ್ವ ಮಟ್ಟದಲ್ಲಿ ಪ್ರಭಾವೀ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಮಾನವ ಹಕ್ಕಿನ ಹೆಸರಿನಲ್ಲಿ ಭಯೋತ್ಪಾದಕರ ಪರವಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ಬೆದರುವ ಅಗತ್ಯ ಇದೀಗ ಭಾರತಕ್ಕಿಲ್ಲ. ಹಾಗಾಗಿಯೇ ಕಾಶ್ಮೀರದಲ್ಲಿ ಭಯೋತ್ಪಾದಕರ ಬೇಟೆ ಹಿಂದೆಂದಿಗಿಂತಲೂ ಹೆಚ್ಚು ವೇಗ ಪಡೆದುಕೊಂಡಿದೆ. ಈ ವರ್ಷದಲ್ಲಿ ಇದುವರೆಗೆ 235 ಉಗ್ರರನ್ನು ಹೊಡೆದುರುಳಿಸಲಾಗಿದೆ.
ಅದಕ್ಕಿಂತಲೂ ವಿಶೇಷವೆಂದರೆ ಉಗ್ರರ ಜೊತೆಗೆ ಇದೀಗ ನಾಗರಿಕರ ವೇಷದಲ್ಲಿ ಉಗ್ರರನ್ನು ಬೆಂಬಲಿಸುವ ಅಥವಾ ತಪ್ಪಿಸಿಕೊಳ್ಳಲು ನೆರವಾಗುವ ಬೆಂಬಲಿಗರಿಗೂ ಯಾವುದೇ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ. ಇದೇ ಶನಿವಾರ ಬೆಳಿಗ್ಗೆ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಅಡಗುತಾಣವನ್ನು ಸುತ್ತುವರಿದ ಸೇನೆ ಮೂವರು ಉಗ್ರರನ್ನು ಬಂಧಿಯಾಗಿಸಿತು. ಈ ಸುದ್ದಿ ತಿಳಿದ ನಾಗರಿಕರ ವೇಷದಲ್ಲಿದ್ದ ಉಗ್ರರ ಸ್ಥಳೀಯ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿ ಸೇನಾ ಪಡೆಗಳನ್ನು ಸುತ್ತುವರಿದು ಕಾರ್ಯಾಚರಣೆಗೆ ತಡೆಯೊಡ್ಡತೊಡಗಿದರು. ಕಲ್ಲು ತೂರಾಟ ನಡೆಸತೊಡಗಿದರು. ಸೇನಾ ವಾಹನಗಳ ಮೇಲೇರಿ ಘೋಷಣೆ ಕೂಗುತ್ತಾ ಗದ್ದಲ ಎಬ್ಬಿಸತೊಡಗಿದರು. ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದಾಗಿಯೂ ಆ ಗುಂಪು ಹಿಂದೆ ಸರಿಯದೇ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಲೇ ಇತ್ತು.
ಇನ್ನೇನು ಆ ಉಗ್ರರು ತಪ್ಪಿಸಿಕೊಂಡುಬಿಡುತ್ತಾರೆ ಎನ್ನುವುದನ್ನರಿತ ಸೇನಾ ಸಿಬ್ಬಂದಿ ಆ ಗುಂಪನ್ನು ಚದುರಿಸಲು ಗುಂಡು ಹಾರಿಸತೊಡಗಿದರು. ಅಂಥದ್ದೊಂದು ಸಂದರ್ಭವನ್ನು ನಿರೀಕ್ಷಿಸಿಯೇ ಇರದಿದ್ದ ನಾಗರಿಕರ ವೇಷದಲ್ಲಿದ್ದ ಆ ಜನರು ಪ್ರಾಣ ಭಯದಿಂದ ದಿಕ್ಕಾಪಾಲಾಗಿ ಓಡತೊಡಗಿದರು. ಅಷ್ಟರಲ್ಲಾಗಲೇ ನಮ್ಮ ಯೋಧರ ಗುಂಡಿಗೆ ಏಳು ಜನ ಆ ನಾಗರಿಕ ವೇಷದ ಭಯೋತ್ಪಾದಕ ಬೆಂಬಲಿಗರು ಸ್ಥಳದಲ್ಲೇ ಮೃತಪಟ್ಟಿದ್ದರು. ಅನೇಕರು ಗಾಯಗೊಂಡರು. ಅದೇ ಸಮಯದಲ್ಲಿ ಆ ಮೂವರು ಉಗ್ರರನ್ನೂ ಹೊಡೆದುರುಳಿಸಲಾಯಿತು.
ಒಟ್ಟಿನಲ್ಲಿ ನಾಗರಿಕರ ವೇಷದಲ್ಲಿ, ಮಹಿಳೆಯರ ವೇಷದಲ್ಲಿ, ವಿದ್ಯಾರ್ಥಿಗಳ ವೇಷದಲ್ಲಿ ಭಯೋತ್ಪಾದಕರಿಗೆ ಬೆಂಬಲವಾಗಿ ನಿಲ್ಲುವವರೆಲ್ಲರಿಗೂ ಇದೊಂದು ಆಘಾತಕಾರೀ ಸುದ್ದಿ. ಅವರೆಲ್ಲರೂ ಮುಂದೆ ಈ ಘಟನೆಯಿಂದ ಪಾಠ ಕಲಿತು ತಟಸ್ಥವಾಗುಳಿದರೆ ಅವರಿಗೂ ಒಳ್ಳೆಯದು ಮತ್ತು ದೇಶಕ್ಕೂ ಒಳ್ಳೆಯದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.