ನವದೆಹಲಿ: ಕೌಶಲ್ಯ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಯ ಗುರಿಗಳನ್ನು ತಲುಪುವತ್ತ ಹೆಜ್ಜೆ ಹಾಕುತ್ತಿರುವ ಸಹವರ್ತಿ ರಾಷ್ಟ್ರಗಳಿಗೆ ಬೆಂಬಲ ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ ನವದೆಹಲಿಯಲ್ಲಿ 4ನೇ ಪಾಟ್ನರ್ಸ್ ಫೋರಂನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡ ಬಜೆಟ್ಗಳಿಂದ ದೊಡ್ಡ ಫಲಿತಾಂಶದವರೆಗೆ, ಮನಸ್ಥಿತಿ ಬದಲಾವಣೆಯಿಂದ ಮೇಲ್ವಿಚಾರಣೆಯವರೆಗೆ ಸಾಕಷ್ಟು ಮಧ್ಯಸ್ಥಿಕೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಾಗರಿಕರ ನಡುವಣ ಪಾಲುದಾರಿಕೆ, ಸಮುದಾಯಗಳ ನಡುವಣ ಪಾಲುದಾರಿಕೆ, ದೇಶಗಳ ನಡುವಣ ಪಾಲುದಾರಿಕೆಗಳ ಅಗತ್ಯತೆ ಪ್ರತಿಪಾದಿಸಿದ ಅವರು, ಪಾಲುದಾರಿಕೆಗಳ ಮೂಲಕ ಗುರಿಗಳನ್ನು ತಲುಪಲು ಸಾಧ್ಯ ಎಂದರು.
ಅಭಿವೃದ್ಧಿಯ ಗುರಿಗಳನ್ನು ತಲುಪಲು ಹೆಜ್ಜೆ ಇಡುತ್ತಿರುವ ಸಹವರ್ತಿ ರಾಷ್ಟ್ರಗಳಿಗೆ ಕೌಶಲ್ಯ ನಿರ್ಮಾಣ, ತರಬೇತಿ ಕಾರ್ಯಕ್ರಮ, ಅಗ್ಗದ ಔಷಧ, ಜ್ಞಾನದ ವರ್ಗಾವಣೆ, ಕಾರ್ಯಕ್ರಮಗಳ ವಿಲೀನಗಳ ಮೂಲಕ ಭಾರತ ಸಹಕಾರ ನೀಡಲಿದೆ ಎಂದರು.
ತಾಯಿಯ ಆರೋಗ್ಯ ಮಗುವಿನ ಆರೋಗ್ಯವನ್ನು ನಿರ್ಧರಿಸುತ್ತದೆ, ಮಗುವಿನ ಆರೋಗ್ಯ ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದ ಅವರು, ಮುಂಬರುವ ದಿನಗಳಲ್ಲಿ ಸಾರ್ವಜನಿಕ ಆರೋಗ್ಯದ ಮೇಲಿನ ವ್ಯಯವನ್ನು ಹೆಚ್ಚಳಗೊಳಿಸಲಾಗುತ್ತದೆ ಎಂದರು.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.