ಶಿಲ್ಲಾಂಗ್: ವಿಭಜನೆಯ ಸಂದರ್ಭದಲ್ಲೇ ಭಾರತ ತನ್ನನ್ನು ತಾನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಿಕೊಳ್ಳಬೇಕಿತ್ತು ಎಂದು ಮೇಘಾಲಯ ಹೈಕೋರ್ಟ್ನ ನ್ಯಾಯಾಧೀಶ ಸುದೀಪ್ ರಂಜನ್ ಸೇನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಧರ್ಮದ ಆಧಾರದಲ್ಲಿ ವಿಭಜನೆ ನಡೆಯಿತು. ಹೀಗಾಗಿ ಪಾಕಿಸ್ಥಾನ ತನ್ನನ್ನು ತಾನು ಇಸ್ಲಾಂ ರಾಷ್ಟ್ರ ಎಂದು ಘೋಷಣೆ ಮಾಡಿತು, ಅದೇ ರೀತಿ ಭಾರತ ಕೂಡ ಹಿಂದೂ ರಾಷ್ಟ್ರ ಎಂದು ಘೋಷಿಸುವ ಬದಲು ಜಾತ್ಯಾತೀತವಾಗಿ ಉಳಿದುಬಿಟ್ಟಿತು’ ಎಂದಿದ್ದಾರೆ.
ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಹಿಂಸೆ ತಾಳಲಾರದೆ ಭಾರತಕ್ಕೆ ಬರುವ ಹಿಂದೂ, ಸಿಖ್, ಜೈನ, ಬುದ್ಧ, ಕ್ರಿಶ್ಚಿಯನ್, ಖಾಜಿ, ಗಾರೋ ಜನಾಂಗದವರಿಗೆ ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಿಕೊಡಬೇಕು ಮತ್ತು ಯಾವುದೇ ದಾಖಲೆಗಳು ಇಲ್ಲದಿದ್ದರೂ ಅವರಿಗೆ ಭಾರತೀಯ ನಾಗರಿಕತ್ವವನ್ನು ಪ್ರದಾನಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ವಿಭಜನೆಯ ವೇಳೆ ಭಾರತವನ್ನು ಪ್ರವೇಶಿಸಿರುವ ಹಿಂದೂಗಳನ್ನು ಇಂದಿಗೂ ವಿದೇಶಿಯರು ಎಂಬಂತೆ ಪರಿಗಣಿಸಲಾಗುತ್ತಿರುವುದು ದುರಾದೃಷ್ಟಕರ, ನನ್ನ ಪ್ರಕಾರ ಇದು ಕಾನೂನುಬಾಹಿರ ಕೃತ್ಯ, ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದುದು ಎಂದಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಹಿಂದೂ ಮತ್ತು ಸಿಖ್ರು ಯಾವುದೇ ಸಂದರ್ಭದಲ್ಲೂ ಭಾರತಕ್ಕೆ ವಾಪಾಸ್ ಬರಲು ಅನುವು ಮಾಡಿಕೊಡಬೇಕು ಮತ್ತು ಅವರಿಗೆ ಭಾರತೀಯ ನಾಗರಿಕತ್ವ ನೀಡಬೇಕು ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ನಾಗರಿಕತ್ವ ಸರ್ಟಿಫಿಕೇಟ್ ಪಡೆಯಲು ಅನರ್ಹಗೊಂಡ ವ್ಯಕ್ತಿಯೊಬ್ಬರ ಪ್ರಕರಣವನ್ನು ವಿಚಾರಣೆ ನಡೆಸಿದ ಸಂದರ್ಭ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.