ಕಾನ್ಪುರ: ಉತ್ತರಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಕಳೆದ ಶನಿವಾರ ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ-IIನ ಕಾಲಕ್ಕೆ ಸೇರಿದ್ದು ಎನ್ನಲಾದ ಐದು ಬಂಗಾರ ನಾಣ್ಯಗಳು ಪತ್ತೆಯಾಗಿವೆ.
ರಾಯ್ಪುರ್ ಪ್ರದೇಶದಲ್ಲಿ ಸುರಂಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ವೇಳೆ ನಾಲ್ವರು ಕಾರ್ಮಿಕರಿಗೆ ಮಣ್ಣಿನ ಮಡಕೆಯೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಕುತೂಹಲದಿಂದ ಒಡೆದು ನೋಡಿದಾಗ ಚಿನ್ನದ ಐದು ನಾಣ್ಯಗಳು ಪತ್ತೆಯಾಗಿವೆ. ಸ್ಥಳಿಯ ಅಕ್ಕಸಾಲಿಗನ ಬಳಿ ಅದು ಚಿನ್ನದೆಂದು ಖಚಿತಪಡಿಸಿ ಅವುಗಳನ್ನು ತಮ್ಮ ಮಧ್ಯೆ ಹಂಚಿಕೊಂಡಿದ್ದಾರೆ.
ಮುನೇಶ್ ಎಂಬಾತ ನಾಣ್ಯವನ್ನು ಅಕ್ಕಸಾಲಿಗನಿಗೆ ರೂ.21 ಸಾವಿರಕ್ಕೆ ಮಾರಾಟ ಮಾಡಿದ್ದ. ಆ ಅಕ್ಕಸಾಲಿಗ ಈ ವಿಷಯವನ್ನು ಯಾರದ್ದೋ ಬಳಿ ಹೇಳಿಕೊಂಡಿದ್ದ. ಇದರಿಂದ ಸುದ್ದಿಯಿಡೀ ಪ್ರಚಾರಗೊಂಡಿದೆ. ಈ ನಾಲ್ವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರ ಕಿವಿಗೂ ಈ ಸುದ್ದಿ ಬಿದ್ದು, ಅವರು ನಾಣ್ಯವನ್ನು ನಮಗೆ ನೀಡಿಲ್ಲವೆಂದು ಸಿಡಿಮಿಡಿಗೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿ ನಾಣ್ಯವನ್ನು ವಶಪಡಿಸಿಕೊಂಡಿದ್ದಾರೆ. ಪುರಾತತ್ವ ಇಲಾಖೆ ಇದು ಚಂದ್ರಗುಪ್ತ-IIಗೆ ಸೇರಿದ ನಾಣ್ಯ ಎಂದು ಖಚಿತಪಡಿಸಿದೆ. ಇದರ ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದೆ.
ನಾಣ್ಯ ಸಿಕ್ಕ ಸ್ಥಳದಲ್ಲಿ ಪೊಲೀಸರು ಹೆಚ್ಚಿನ ಬಿಗಿ ಭದ್ರೆಯನ್ನು ಹಾಕಿದ್ದಾರೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.