ಚೆನ್ನೈ: ಸುಟ್ಟಗಾಯಗಳು ಜಾಗತಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಮತ್ತು ಇದರಿಂದಾಗಿ ವಾರ್ಷಿಕ 1,80,000 ಜನರ ಸಾವು ಸಂಭವಿಸುತ್ತಿದೆ ಎಂಬುದು ತಿಳಿದಿದೆಯಾ? ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಭಾರತದಲ್ಲಿ ವಾರ್ಷಿಕ 10,00,000 ಜನರು ಅತ್ಯಂತ ಗಂಭೀರ ಸ್ವರೂಪದ ಸುಟ್ಟ ಗಾಯಗಳಿಗೆ ಒಳಗಾಗುತ್ತಿದ್ದಾರೆ.
ಆಸಿಡ್ ಅಟ್ಯಾಕ್ನಿಂದ ಮುಖದ ಸ್ವರೂಪ, ಕಣ್ಣು, ತಲೆಗೂದಲನ್ನು ಕಳೆದುಕೊಳ್ಳುವವರು ಕೂಡ ಇದೇ ಸಂಖ್ಯೆಯಲ್ಲಿ ಸೇರುತ್ತಾರೆ.
ಕೆಲವರು ಪ್ಲಾಸ್ಟಿಕ್ ಸರ್ಜರಿ, ಸ್ಕಿನ್ ಗ್ರಾಫ್ಟಿಂಗ್, ಕಾಸ್ಮೆಟಿಕ್ ಪ್ರಕ್ರಿಯೆಗಳಿಗೆ ಒಳಪಟ್ಟು ತಮ್ಮ ಹಿಂದಿನ ರೂಪಕ್ಕೆ ಮರಳಿ ಸಹಜ ಜೀವನ ನಡೆಸಲು ಯೋಗ್ಯರಾಗುತ್ತಾರೆ. ಆದರೆ ಹಲವಾರು ಮಂದಿಗೆ ದುಬಾರಿ ಮೊತ್ತದ ಈ ಚಿಕಿತ್ಸೆಗಳು ಕೈಗೆಟುಕದ ಗಗನಕುಸುಮಗಳು. ಹೀಗಾಗಿ ತಮ್ಮ ಇಡೀ ಜೀವನವನ್ನು ಅವರು ನರಕಯಾತನೆಯೊಂದಿಗೆ ಕಳೆಯುತ್ತಾರೆ.
ಇಂತಹ ಸಂತ್ರಸ್ತರಿಗೆಂದೇ ಅತಿಜೀವನ್ ಫೌಂಡೇಶನ್, ಚೆನ್ನೈನ ಸ್ಟ್ಯಾಂನ್ಲೆ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್ನೊಂದಿಗೆ ಸೇರಿ ಸುಟ್ಟ ಮತ್ತು ಆಸಿಡ್ ದಾಳಿ ಸಂತ್ರಸ್ತರಿಗೆ ಮೂರು ದಿನಗಳ ಕಾಲ ಉಚಿತ ಕೂದಲು ಜೋಡಣಾ (ಹೇರ್ ಟ್ರಾನ್ಸ್ಪ್ಲಾಂಟ್) ವರ್ಕ್ಶಾಪ್ನ್ನು ಆಯೋಜನೆಗೊಳಿಸಿತ್ತು.
ಖಾಸಗಿ ಆಸ್ಪತ್ರೆಗಳಲ್ಲಿ ಹೇರ್ ಟ್ರಾನ್ಸ್ಪ್ಲಾಂಟ್ಗೆ ರೂ.1ಲಕ್ಷದಿಂದ ರೂ.3ಲಕ್ಷದವರೆಗೆ ವ್ಯಯವಾಗುತ್ತದೆ. ಈ ದುಬಾರಿ ಮೊತ್ತದ ಪ್ರಕ್ರಿಯೆಯನ್ನು ಈ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆಸಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವೇ. ಸುಮಾರು 20 ಸಂತ್ರಸ್ತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಡಾ.ವಿವೇಕ್ ಕುಮಾರ್ ಸಕ್ಸೇನಾ ನೇತೃತ್ವದಲ್ಲಿ ನಡೆದ ಚಿಕಿತ್ಸೆಯನ್ನು ನೇರ ಪ್ರಸಾರ ಮಾಡಲಾಗಿತ್ತು, ವೈದ್ಯಕೀಯ ವಿದ್ಯಾರ್ಥಿಗಳು ಇದನ್ನು ವೀಕ್ಷಣೆ ಮಾಡಿದ್ದಾರೆ.
source: www.thebetterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.