ವಿದ್ಯಾ ದಾನವನ್ನು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವ ಸಲುವಾಗಿ ಉತ್ತರಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ‘ವಿದ್ಯಾ ದಾನ್, ಏಕ್ ಶ್ರೇಷ್ಠ್ ದಾನ್’ ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಅವರ ಈ ಅಭಿಯಾನದ ಫಲವಾಗಿ 700 ವಿದ್ಯಾವಂತ ನಾಗರಿಕರು ಉಚಿತವಾಗಿ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಲು ಮುಂದಾಗಿದ್ದಾರೆ.
ಬಹ್ರಾಯ್ಜ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ಮಾಲಾ ಶ್ರೀವಾಸ್ತವ್ ವಿದ್ಯಾ ದಾನ ಅಭಿಯಾನದ ರುವಾರಿ. ಅವರ ಪ್ರಯತ್ನದ ಫಲವಾಗಿ ವೈದ್ಯರುಗಳು, ನಿವೃತ್ತ ಶಿಕ್ಷಕರು, ವಿದ್ಯಾವಂತ ಗೃಹಿಣಿಯರು, ಬೇರೆ ಬೇರೆ ಉದ್ಯೋಗದಲ್ಲಿರುವ ಯುವಕರು ಸರ್ಕಾರಿ ಶಾಲೆಗಳಿಗೆ ಬಂದು ಮಕ್ಕಳಿಗೆ ದಿನದ ಒಂದಿಷ್ಟು ಸಮಯ ಪಾಠ ಹೇಳಿಕೊಡಲು ಆಸಕ್ತಿಯನ್ನು ತೋರಿಸಿದ್ದಾರೆ.
ಇತ್ತೀಚಿಗೆ ಬೇಗಂಪುರ ಸರ್ಕಾರಿ ಶಾಲೆಗೆ ಮೂಲಸೌಕರ್ಯ ವೀಕ್ಷಣೆಗೆ ತೆರಳಿದ್ದ ಮಾಲಾ ಅವರು, ತುಸು ಬಿಡುವು ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡಿದ್ದಾರೆ. ಬಳಿಕ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಬಿಸಿಯೂಟವನ್ನು ಸೇವಿಸಿದ್ದಾರೆ. ಈ ಮೂಲಕ ಉಳಿದವರೂ ಈ ಕಾರ್ಯ ಮಾಡುವಂತೆ ಪ್ರೇರೇಪಿಸಿದ್ದಾರೆ.
ತಮ್ಮ ಜಿಲ್ಲೆಯ ಪ್ರತಿ ಬ್ಲಾಕ್ನಲ್ಲೂ ಕನಿಷ್ಠ 10 ಆದರ್ಶ ವಿದ್ಯಾಲಯಗಳ ರಚನೆ ಮಾಡುವುದು ಅವರ ಗುರಿಯಾಗಿದೆ. ಈ ವಿದ್ಯಾಲಯಗಳು ಶಿಕ್ಷಕರ, ವಿದ್ಯಾರ್ಥಿಗಳ ಸಂಶೋಧನೆಗಳಿಗೆ, ಮಕ್ಕಳ ಸಂಸತ್ತು, ಸಂಪುಟಗಳಿಗೆ ಉತ್ತೇಜನ ನೀಡಲಿದೆ.
ಮಾಲಾ ಅವರ ಕಾರ್ಯವನ್ನು ನೀತಿ ಆಯೋಗ ಕೂಡ ಶ್ಲಾಘಿಸಿದ್ದು, ಆಕೆಯ ದೂರದೃಷ್ಟಿ ಇತರರಿಗೆ ಮಾದರಿ ಎಂದಿದೆ.
source: www.dnaindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.