ನವದೆಹಲಿ: ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈ ಕಮಿಷನ್ ಸಾರ್ಕ್ ಸಭೆಯನ್ನು ಅರ್ಧದಲ್ಲೇ ತೊರೆದಿದೆ. ಪಿಓಕೆ ಸಚಿವ ಸಭೆಯಲ್ಲಿ ಉಪಸ್ಥಿತರಿರುವುದನ್ನು ವಿರೋಧಿಸಿ, ತನ್ನ ಪ್ರತಿಭಟನೆಯನ್ನು ತೋರ್ಪಡಿಸುವ ಸಲುವಾಗಿ ಸಭೆಯನ್ನು ಅರ್ಧಕ್ಕೆ ತೊರೆಯಲಾಗಿದೆ.
ಇಸ್ಲಾಮಾಬಾದ್ನಲ್ಲಿ ಭಾನುವಾರ ಸಾರ್ಕ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಸಭೆಯನ್ನು ಆಯೋಜಿಸಲಾಗಿತ್ತು, ಈ ಸಭೆಗೆ ಪಾಕ್ನ ಭಾರತ ಹೈಕಮಿಷನರ್ ಶುಭಂ ಸಿಂಗ್ ಹಾಜರಾಗಿದ್ದರು. ಆದರೆ ಈ ಸಭೆಯಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಸಚಿವ ಚೌಧರಿ ಮೊಹಮ್ಮದ್ ಸಯೀದ್ ಉಪಸ್ಥಿತರಿರುವುದನ್ನು ಕಂಡು ಶುಭಂ ಸಭೆಯನ್ನು ಅರ್ಧದಲ್ಲೇ ಬಿಟ್ಟು ಹೊರನಡೆದಿದ್ದಾರೆ.
ಪಿಓಕೆಯನ್ನು ಭಾರತ ತನ್ನದೇ ಭಾಗ ಎಂದು ಪರಿಗಣಿಸಿದೆ, ಹೀಗಾಗಿ ಪಾಕ್ ನೇಮಿತ ಸಚಿವರು ಉಪಸ್ಥಿತಿಯನ್ನು ಭಾರತ ಬಲವಾಗಿ ಖಂಡಿಸಿದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.