ವಯನಾಡ್: ಕೇರಳದ ನೆರೆ ಅಲ್ಲಿನ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಅನ್ನ ನೀರು ಇಲ್ಲದೆ, ವಾಸಿಸಲು ಮನೆಯಿಲ್ಲದೆ ಬಹುತೇಕ ಮಂದಿ ನಿರ್ಗತಿಕರಾಗಿದ್ದಾರೆ. ಅವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕರು ಕೇರಳಿಗರ ನೆರವಿಗೆ ಧಾವಿಸಿದ್ದಾರೆ, ಅಕ್ಕಿ, ನೀರು ಮುಂತಾದ ಸಾಮಾಗ್ರಿಗಳನ್ನು ಅವರಿಗೆ ಪೂರೈಕೆ ಮಾಡುತ್ತಿದ್ದಾರೆ.
ಸಮಾಜ ಸೇವಾ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು, ಇತರ ಜನರು ಕೇರಳ ಜನರ ಪಾಲಿಗೆ ಅಪತ್ಭಾಂದವರಾಗಿದ್ದಾರೆ. ಸೇನಾ ಪಡೆಗಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿವೆ. ಶಿಬಿರಗಳಲ್ಲಿನ ಜನರಿಗೆ ಅಗತ್ಯ ನೆರವುಗಳನ್ನು ನೀಡುವ ಕಾರ್ಯವನ್ನು ಇತರರು ಮಾಡುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಐಎಎಸ್ ಅಧಿಕಾರಿಗಳಾದ ಜಿ.ರಾಜಮಾಣಿಕ್ಯಂ ಮತ್ತು ಎನ್ಎಸ್ಕೆ ಉಮೇಶ್ ಅವರು ಅಕ್ಕಿಯ ಮೂಟೆಗಳನ್ನು ಹೆಗಲ ಮೇಲೆ ಹೊತ್ತು ನಿರಾಶ್ರಿತ ಶಿಬಿರಗಳಿಗೆ ಕೊಂಡೊಯ್ದಿದ್ದಾರೆ.
ಉದ್ಯೋಗಿಗಳಿಗೆ ಕುರ್ಚಿಯಲ್ಲಿ ಕುಳಿತು ಆದೇಶ ನೀಡುವ ಹುದ್ದೆಯಲ್ಲಿರುವ ಇವರು, ಕಾರ್ಮಿಕರೊಂದಿಗೆ ಸೇರಿ ಅಕ್ಕಿ ಮೂಟೆಗಳನ್ನು ಹೊತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.