ನವದೆಹಲಿ: ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಪ್ರತಿ ಆರೋಪಕ್ಕೂ ದಿಟ್ಟ ಪ್ರತ್ಯುತ್ತರವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳ ಕೆಲ ಸದಸ್ಯರ ಕರ್ಕಶ ಬೊಬ್ಬೆಯ ನಡುವೆಯೂ ತಮ್ಮ ವಾಗ್ ಚಾತುರ್ಯದ ಮೂಲಕ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ಮೋದಿ ಅದ್ಭುತ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಸದನದಲ್ಲಿ ತೋರಿದ ಅಸಮಂಜಸ ರೀತಿಯ ವರ್ತನೆಗೂ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು.
‘ಅಭಿವೃದ್ಧಿಯನ್ನು ತೀವ್ರವಾಗಿ ವಿರೋಧಿಸುವ ಕೆಲವರ ನಕರಾತ್ಮಕತೆಯನ್ನು ದೇಶ ಇಂದು ನೋಡಿದೆ, ನಮಗೆ ಸಂಖ್ಯಾ ಬಲ ಇರುವ ಕಾರಣಕ್ಕೆಯೇ ನಾವು ಇಲ್ಲಿದ್ದೇವೆ. ಪ್ರತಿಪಕ್ಷಗಳಿಗೆ ಇರುವ ಅಜೆಂಡಾ ಒಂದೇ, ಅದು ಮೋದಿಯನ್ನು ತೊಲಗಿಸುವುದು, ಅವಿಶ್ವಾಸ ನಿರ್ಣಯದ ಬಗೆಗಿನ ಚರ್ಚೆ ಆರಂಭಕ್ಕೂ ಮುನ್ನವೇ ಒಬ್ಬರು ನನ್ನ ಬಳಿ ಬಂದು ’ಎದ್ದೇಳಿ, ಎದ್ದೇಳಿ’ ಎಂದರು, ಅಧಿಕಾರಕ್ಕೆ ಬರಲು ಅಷ್ಟು ಅವಸರವೇ, ಮೋದಿಯನ್ನು ಉರುಳಿಸಲು ಅಷ್ಟೊಂದು ಅವಸರ ಯಾಕೆ? ಪ್ರಜಾತಂತ್ರದಲ್ಲಿ ಜನರೇ ಜನಾರ್ಧನರಾಗಿರುತ್ತಾರೆ, ಅವರೇ ನಮ್ಮನ್ನು ಇಲ್ಲಿ ಕೂರಿಸಿದ್ದಾರೆ’ ಎಂದರು.
ಕಾಂಗ್ರೆಸ್ಗೆ ಆರ್ಬಿಐ ಮೇಲಾಗಲಿ, ಇವಿಎಂ ಮೇಲಾಗಲಿ, ನ್ಯಾಯಾಂಗದ ಮೇಲಾಗಲಿ ನಂಬಿಕೆ ಇಲ್ಲ, ಅವರಿಗೆ ಅವರ ಮೇಲೋ ನಂಬಿಕೆ ಇಲ್ಲ ಎಂಬುದು ಕೂಡ ಇಂದು ಸಾಬೀತಾಗಿದೆ ಎಂದರು.
ಕಾಂಗ್ರೆಸ್ ಕೇವಲ ಒಬ್ಬ ಮೋದಿಯನ್ನು ತೊಲಗಿಸಲು ಯಾರೊಂದಿಗಿಲ್ಲಾ ಕೈಜೋಡಿಸಿದ್ದಾರೆ, ತಮ್ಮ ಮೈತ್ರಿ ಪಕ್ಷಗಳ ವಿಶ್ವಾಸವನ್ನು ಪರೀಕ್ಷೆ ಮಾಡುವ ಸಲುವಾಗಿ ಇಂದು ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ ಎಂದರು.
ಒಬ್ಬ ವ್ಯಕ್ತಿಯ ಬೇಜವಾಬ್ದಾರಿ ಸುಳ್ಳು ಹೇಳಿಕೆಯಿಂದಾಗಿ ಫ್ರಾನ್ಸ್ ಮತ್ತು ಭಾರತ ಎರಡೂ ದೇಶಗಳು ಪ್ರಕಟನೆಯನ್ನು ಹೊರಡಿಸಬೇಕಾಗಿ ಬಂತು, ಭದ್ರತೆಯ ವಿಷಯದಲ್ಲಿ ರಾಜಕೀಯವನ್ನು ತರಬೇಡಿ ಎಂದು ಕಾಂಗ್ರೆಸ್ನಲ್ಲಿ ಮನವಿ ಮಾಡುತ್ತೇನೆ ಎಂದರು.
ನಾಮ್ಧಾರಿಗಳ ಕಣ್ಣಲ್ಲಿ ಕಣ್ಣಿಡುವ ಧೈರ್ಯ ಕಾಮ್ಧಾರಿಗಳಾದ ನಮಗೆ ಇಲ್ಲ. ಕಣ್ಣಲ್ಲಿ ಕಣ್ಣಿಟ್ಟ ಚೌಧುರಿ ಚರನ್ ಸಿಂಗ್, ಅಂಬೇಡ್ಕರ್, ದೇವೇಗೌಡ, ಪ್ರಣವ್ ಮುಖರ್ಜಿಯವರನ್ನೆಲ್ಲಾ ಕಾಂಗ್ರೆಸ್ ಏನು ಮಾಡಿದೆ ಎಂಬುದು ನಮಗೆ ತಿಳಿದಿದೆ ಎಂದ ಅವರು, ಕಾಂಗ್ರೆಸ್ ತಾನೇ ದೇಶದ ಭಾಗ್ಯ ವಿದಾತ ಎಂದು ಅಂದುಕೊಂಡಿದೆ, ಈ ದೇಶದಲ್ಲಿ ಜನರೇ ಭಾಗ್ಯ ವಿದಾತರು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.