ನವದೆಹಲಿ: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ 97ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಭಾರತದ ಇತಿಹಾಸದ ಅತ್ಯಂತ ಕಠಿಣ ಅವಧಿಯಲ್ಲೂ ಅಮೋಘ ನಾಯಕತ್ವವನ್ನು ಪ್ರದರ್ಶಿಸಿದ ನರಸಿಂಹ ರಾವ್ ದಕ್ಷತೆಯನ್ನು ಅವರು ಕೊಂಡಾಡಿದ್ದಾರೆ.
ಬಾಬ್ರಿ ಮಸೀದಿ- ರಾಮಜನ್ಮ ಭೂಮಿ ವಿವಾದ ನರಸಿಂಹ ರಾವ್ ಅವಧಿಯಲ್ಲಿ ಅತ್ಯಂತ ಕಠಿಣ ಸವಾಲನ್ನೊಡ್ಡಿತ್ತು.
ಟ್ವಿಟ್ ಮಾಡಿರುವ ಮೋದಿ, ಜನ್ಮದಿನದ ಪ್ರಯುಕ್ತ ನರಸಿಂಹ ರಾವ್ ಅವರನ್ನು ಸ್ಮರಿಸುತ್ತಿದ್ದೇನೆ, ದೇಶದ ಇತಿಹಾಸದ ಕಠಿಣ ಅವಧಿಯಲ್ಲೂ ಒರ್ವ ರಾಜನೀತಿಜ್ಞನಾಗಿ ಅಮೋಘ ನಾಯಕತ್ವವನ್ನು ನೀಡಿದ್ದಾರೆ. ಮಹಾನ್ ಬುದ್ಧಿಜೀವಿ ಹಾಗೂ ವಿದ್ವಾಂಸರಾಗಿದ್ದರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.