ಅಹ್ಮದಾಬಾದ್: ಪಕೋಡ ಮಾರಾಟ ಕೂಡ ಒಂದು ಉದ್ಯೋಗ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿತ್ತು, ಇದು ನಿರುದ್ಯೋಗಿಗಳಿಗೆ ಮಾಡಿದ ಅವಮಾನ ಎಂದೆಲ್ಲ ಆರೋಪಿಸಿತು. ಆದರೆ ಮೋದಿಯವರ ಅದೇ ಮಾತು ಗುಜರಾತ್ನ ಅಪ್ಪಟ ಕಾಂಗ್ರೆಸ್ ಅಭಿಮಾನಿಯೊಬ್ಬನ ಬದುಕನ್ನೇ ಬದಲಾಯಿಸಿದೆ.
ನಾರಾಯಣಭಾಯ್ ರಜಪೂತ್ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ, ಎನ್ಎಸ್ಯುಐ ಸದಸ್ಯ. ಪಕ್ಷಕ್ಕಾಗಿ ಶ್ರಮಪಟ್ಟು ದುಡಿಯುತ್ತಾನೆ. ಹಿಂದಿಯಲ್ಲಿ ಪದವಿ ಪಡೆದುಕೊಂಡಿರುವ ಈತ ನಿರುದ್ಯೋಗಿ. ಆದರೆ ಇತ್ತೀಚಿಗೆ ಪಕೋಡ ಮಾರಾಟ ಕೂಡ ಒಂದು ತರನಾದ ಉದ್ಯೋಗ ಎಂಬ ಪ್ರಧಾನಿಗಳ ಮಾತನ್ನು ಈತ ಗಂಭೀರವಾಗಿ ಪರಿಗಣಿಸಿ ಪಕೋಟ ಮಾರಾಟಕ್ಕಿಳಿದಿದ್ದಾನೆ. ಕೇವಲ ಎರಡು ತಿಂಗಳಲ್ಲಿ ವಡೋದರದ ಹಲವಾರು ಕಡೆ ಈತ 35ಕ್ಕೂ ಅಧಿಕ ಪಕೋಡ ಫ್ರಾಂಚೈಸಿಗಳನ್ನು ಹೊಂದಿದ್ದಾನೆ.
ಪ್ರಧಾನಿ ಮಾತು ನನ್ನನ್ನು ಪಕೋಡ ವ್ಯಾಪಾರಕ್ಕಿಳಿಯುವಂತೆ ಮಾಡಿತು. ಇಂದು ಅದರಿಂದಲೇ ನನ್ನ ಜೀವನ ಸೆಟಲ್ ಆಗಿದೆ. ಮೊದಲು 10 ಕೆಜಿಯಷ್ಟು ಪಕೋಡ ತಯಾರಿಸುತ್ತಿದ್ದೆ, ಈಗ ಅದು 600 ಕೆಜಿಗೆ ತಲುಪಿದೆ ಎನ್ನುತ್ತಾನೆ.
ನಾನು ಈಗಲೂ ಅಪ್ಪಟ ಕಾಂಗ್ರೆಸ್ಸಿಗ, ಆದರೆ ಮೋದಿ ರಾಹುಲ್ ಸೇರಿದಂತೆ ಸಮಸ್ತ ಭಾರತೀಯರಿಗೆ ಪ್ರಧಾನಿಗಳು, ಅವರ ಮಾತನ್ನು ಕೇಳಬಾರದು ಎಂದೇನಿಲ್ಲ ಎಂದಿದ್ದಾನೆ. ತನ್ನ ಪಕೋಡ ಅಂಗಡಿಗೆ ಶ್ರೀರಾಮ್ ದಲ್ವಾಡ ಸೆಂಟರ್ ಎಂದು ಹೆಸರಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.