ನವದೆಹಲಿ : ದೇಶದ ಮೊಟ್ಟಮೊದಲ ತೆರಿಗೆ ಸುಧಾರಣೆ ಜಿಎಸ್ಟಿ ಜಾರಿಯ ಬಳಿಕ ಇದೀಗ ಕೇಂದ್ರ ಸರ್ಕಾರವು ರಾಜಕೀಯ ದೇಣಿಗೆಗಳಲ್ಲಿ ಸುಧಾರಣೆ ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಜೇಟ್ಲಿ ಜಿಎಸ್ಟಿ ಪ್ರಕ್ರಿಯೆ ಅಂತ್ಯಗೊಂಡ ತಕ್ಷಣದಿಂದ ರಾಜಕೀಯ ದೇಣಿಗೆಗಳ ಶುದ್ಧೀಕರಣದ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ಅತಿ ಮಹತ್ವದ ಹೆಜ್ಜೆಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಘೋಷಿಸಿದ್ದಾರೆ.
ರಾಜಕೀಯ ದೇಣಿಗೆಗಳ ಪ್ರಸ್ತುತ ವ್ಯವಸ್ಥೆ 70 ವರ್ಷ ಹಳೆಯದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಇಲ್ಲಿ ಸುಧಾರಣೆ ತರಲು ಬಯಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಅಪಾರ ಬೆಂಬಲವೂ ಇದೆ ಎಂದರು.
ನಗದಿನ ಬದಲು ಎಲೆಕ್ಟ್ರಾನಿಕ್ ಬಾಂಡ್ಗಳ ಮೂಲಕ ರಾಜಕೀಯ ದೇಣಿಗೆಗಳನ್ನು ಸಂಗ್ರಹಿಸುವಂತೆ ಅವರು ರಾಜಕೀಯ ಪಕ್ಷಗಳಿಗೆ ಈ ಹಿಂದೆ ಕರೆ ನೀಡಿದ್ದರು. ಒಂದು ವೇಳೆ ರಾಜಕೀಯ ದೇಣಿಗೆಗಳ ಶುದ್ಧೀಕರಣ ಕಾರ್ಯ ನಡೆದರೆ ಇದು ಜಿಎಸ್ಟಿಯ ಬಳಿಕದ ಅತೀ ದೊಡ್ಡ ಸುಧಾರಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.