ಶ್ರೀನಗರ: ಕಲ್ಲು ತೂರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಪರಿಣಾಮವಾಗಿ ಹಲವಾರು ಮಂದಿಯ ಪ್ರಾಣವನ್ನು ಉಳಿಸಲು ಸಾಧ್ಯವಾಯಿತು ಎಂದು ಸೇನಾ ಮೇಜರ್ ಲೀತುಲ್ ಗೋಗೈ ಹೇಳಿಕೊಂಡಿದ್ದಾರೆ. ಅಲ್ಲದೇ ಜೀಪಿಗೆ ಕಟ್ಟಲ್ಪಟ್ಟ ವ್ಯಕ್ತಿ ಉದ್ರಿಕ್ತ ಗುಂಪಿನ ರಿಂಗ್ ಲೀಡರ್ ಆಗಿದ್ದ ಮತ್ತು ಆತ ಕಲ್ಲು ತೂರಾಟ ನಡೆಸಲು ಪ್ರಚೋದನೆ ನೀಡುತ್ತಿದ್ದ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಎಪ್ರಿಲ್ ೯ರಂದು ಬುದಗಾಂ ಜಿಲ್ಲೆಯ ಉತ್ಲಿಗಾಂ ಗ್ರಾಮದ ಚುನಾವಣಾ ಕೇಂದ್ರದ ಆವರಣದಲ್ಲಿ ಬೆರಣಿಕೆಯಷ್ಟಿದ್ದ ಯೋಧರನ್ನು 1200 ಕಲ್ಲು ತೂರಾಟಗಾರರು ಸುತ್ತುವರೆದಿದ್ದರು. ಒಂದು ವೇಳೆ ನಾವು ಫೈರಿಂಗ್ಗೆ ಆದೇಶಿಸುತ್ತಿದ್ದರೆ ಕನಿಷ್ಟ ಅಂದರೂ 12 ಜೀವ ಹಾನಿಯಾಗುತಿತ್ತು ಎಂದು ಗೋಗೈ ಹೇಳಿದ್ದಾರೆ.
ಉದ್ರಿಕ್ತ ಜನ ನಮ್ಮನ್ನು ಸುತ್ತುವರೆದಿದ್ದರೆ ಎಂಬ ದೂರವಾಣಿ ಕರೆ ಬಂದ ಹಿನ್ನಲೆಯಲ್ಲಿ ನಾವು ಆ ಚುನಾವಣಾ ಕೇಂದ್ರದತ್ತ ತೆರಳಿದ್ದೆವು. ಈ ಉದ್ರಿಕ್ತ ಗುಂಪಿನ ರಿಂಗ್ ಲೀಡರ್ನಂತೆ ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡುತ್ತಿದ್ದ ಫಾರೂಖ್ ಅಹ್ಮದ್ ದಾರ್ನನ್ನು ಹಿಡಿಯಲು ಮುಂದಾದೆವು ಆದರೆ ಆತ ಬೈಕಿನಲ್ಲಿ ತಪ್ಪಿಸಲು ಮುಂದಾದ ಆದೇಗೋ ನಮ್ಮ ಯೋಧರು ಅವನನ್ನು ಹಿಡಿದರು. ತಕ್ಷಣ ಸ್ಥಳಿಯ ಮಸೀದಿಯಲ್ಲಿ ಈ ಬಗ್ಗೆ ಮೈಕ್ ಮೂಲಕ ಘೋಷಣೆ ಮಾಡಿದರು. ಆಗ ಉದ್ರಿಕ್ತರು ಬಹಳಷ್ಟು ಸಂಖ್ಯೆಯಲ್ಲಿ ಜಮಾವಣೆಗೊಳ್ಳಲಾರಂಭಿಸಿದರು. ಕಲ್ಲು ಬಿಸಾಕಲು ಮುಂದಾದರು. ಆದರೆ ದಾರ್ನನ್ನು ಜೀಪಿಗೆ ಕಟ್ಟಿದ ಪರಿಣಾಮವಾಗಿ ಕಲ್ಲು ಬಿಸಾಕುವ ದೈರ್ಯ ಯಾರೂ ಮಾಡಲಿಲ್ಲ. ಇದರಿಂದ ನನ್ನ ಸಹೋದ್ಯೋಗಿಗಳ, ಭಾರತೀಯ ನಾಗರಿಕ ಪ್ರಾಣ ಉಳಿಯಿತು ಎಂದು ಗೋಗೈ ಹೇಳಿಕೊಂಡಿದ್ದಾರೆ.
ಗೋಗೈ ಅವರ ಈ ಕಾರ್ಯಕ್ಕೆ ಚೀಫ್ ಆಫ್ ಆರ್ಮಿ ಸ್ಟಾಫ್ಸ್ ಅಕಮಡೇಶನ್ ಕಾರ್ಡ್ ನೀಡಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.