ಇಟಾನಗರ: ಅರುಣಾಚಲ ಪ್ರದೇಶ ತನ್ನ ಸಂಪುಟ ಸದಸ್ಯರಿಗೆ ಇ-ಸಂಪುಟ ವ್ಯವಸ್ಥೆ ಅಳವಡಿಸಿದ ಮೊದಲ ಈಶಾನ್ಯ ರಾಜ್ಯ ಎನಿಸಿಕೊಂಡಿದೆ.
ಈ ವ್ಯವಸ್ಥೆಯನ್ನು ಬಳಸಿ ಸಚಿವ ಸಂಪುಟ ಸದಸ್ಯರು ಸಭೆಯಲ್ಲಿ ಸಂಪುಟದ ಟಿಪ್ಪಣಿಗಳನ್ನು ಮುಂಗಡವಾಗಿ ಪಡೆಯಬಹುದು. ಸಚಿವ ಸಂಪುಟದ ಸಂಪೂರ್ಣ ವ್ಯವಹಾರಗಳನ್ನು ಇ-ಸಂಪುಟ ಬಳಸಿ ನಡೆಸಬಹುದು.
ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಇಲಾಖೆ ಇ-ಕ್ಯಾಬಿನೆಟ್ ಅನುಷ್ಠಾನಕ್ಕೆ ತಂದಿದ್ದು, ಇದು ಜಾರಿಗೆ ಬಂದಲ್ಲಿ ಸಚಿವರು ಸಂಪೂರ್ಣ ಕಾಗದ ರಹಿತವಾಗಿ ಸಂಪುಟ ಸಭೆಗಳ ತಯಾರಿ, ಪರಿಶೀಲನೆ ಮತ್ತು ಅವಲೋಕನ ಮಾಡಬಹುದು. ಜೊತೆಗೆ ಸರಿಯಾದ ವಿಶ್ಲೇಷಣೆ ಮತ್ತು ಪ್ರತಿಕ್ರಿಯೆ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ-ಕ್ಯಾಬಿನೆಟ್ ಇದಕ್ಕಾಗಿ ವೆಬ್ ಆಧಾರಿತ ಸಾಫ್ಟ್ವೇರ್ ಬಳಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.