ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ ಎರಡು ವರ್ಷಗಳ ಬಳಿಕ ‘ಆದರ್ಶ ಸ್ಮಾರಕಗಳು’ ಪಟ್ಟಿ ತಯಾರಿಸಲಾಗಿದ್ದು, ಪ್ರವಾಸಿಗರು ಸ್ಮಾರಗಳ ಸುತ್ತ ಅಲ್ಲಲ್ಲಿ ತ್ಯಾಜ್ಯಗಲು ಕಂಡು ಬಂದಲ್ಲಿ ‘ಸ್ವಚ್ಛ ಪರ್ಯಟನ್’ ಆ್ಯಪ್ ಮೂಲಕ ದೂರು ನೀಡಬಹುದು.
ಪ್ರವಾಸಿಗರು ಸ್ಮಾರಕಗಳ ಸುತ್ತಲಿನ ತ್ಯಾಜ್ಯಗಳ ಫೋಟೋ ತೆಗೆದು ತಮ್ಮ ಹೇಳಿಕೆಯೊಂದಿಗೆ ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು. ಇದನ್ನು ಎಎಸ್ಐ ನೋಸಲ್ ಅಧಿಕಾರಿಗೆ ತಿಳಿಸುವ ಮೂಲಕ ಸ್ಮಾರಗಳ ಸ್ವಚ್ಛತೆಗೆ ಕ್ರಮಗಳನ್ನು ತೆಗೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.
ಭಾರತದ ಪುರಾತತ್ವ ಇಲಾಖೆ ಸ್ವಚ್ಛತೆಯ ನಿಯತಾಂಕಗಳ ಆಧಾರದ ಮೇಲೆ ಅಗ್ರ 25 ಆದರ್ಶ ಸ್ಮಾರಕಗಳು ಗುರುತಿಸಿದ್ದು, ಗುಜರಾತ್ನ ವಿಶ್ವ ಪಾರಂಪರಿಕ ತಾಣ ‘ರಾಣಿ ಕಿ ವಾವ್’ ದೇಶದ ಸಾಂ ಪ್ರದಾಯಿಕ ಸ್ವಚ್ಛ ತಾಣವೆಂದು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.