ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ 20ನೇ ಯತಿವರ್ಯರಾದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ದಿನಾಂಕ 06-01-2017ನೇ ಶುಕ್ರವಾರದಂದು ನೆರವೇರಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿರುವುದು.
ಇಂದೊಂದು ಆತ್ಯಂತ ಪವಿತ್ರ ಕಾರ್ಯಕ್ರಮವಾಗಿದ್ದು ಜಿ.ಎಸ್.ಬಿ.ಸಮಾಜ ಹಾಗೂ ಶ್ರೀ ಸಂಸ್ಥಾನದ ಶಿಷ್ಯವರ್ಗವು ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತಾಗಲು ನಗರದ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ ಸಮಾಜ ಬಾಂಧವಾರಿಗಾಗಿ ವಿಶೇಷ ರೈಲು ‘ಗುರು ಪ್ರಣಾಮ್ ಯಾತ್ರೆ’ ಆಯೋಜಿಸಲಾಗಿದೆ.
ಈ ವಿಶೇಷ ರೈಲು ಮಂಗಳೂರಿನಿಂದ ನೇರ ಹರಿದ್ವಾರದವರೆಗೆ ದಿನಾಂಕ: 02-01-2017 ರಂದು ಹೊರಟು 04-01-2017 ರಂದು ಹರಿದ್ವಾರ ತಲುಪಲಿದೆ ಕಾರ್ಯಕ್ರಮದ ಬಳಿಕ 07-01-2017 ರಂದು ಹೊರಟು 09-01-2017 ರಂದು ಮಂಗಳೂರು ತಲುಪಲಿರುವುದು. ಸುಮಾರು 1200 ಸಮಾಜ ಬಾಂಧವರು ಮಂಗಳೂರಿನಿಂದ ಈ ವಿಶೇಷ ರೈಲಿನಲ್ಲಿ ಸಂಚರಿಸಲಿದ್ದು ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಕರಿಗೆ ಆಹಾರ, ಹರಿದ್ವಾರದಲ್ಲಿ ವಸತಿ ವ್ಯವಸ್ಥೆ ಒಳಗೊಂಡಿದೆ.
ದಿನಾಂಕ 10.09.2016 ರಿಂದ ನೊಂದಾವಣೆಯು ನಗರದ ರಥಬೀದಿಯಲ್ಲಿರುವ ಶ್ರೀ ಕಾಶೀಮಠ ಸಂಸ್ಥಾನದ ಕೇಂದ್ರ ಲೆಕ್ಕಪತ್ರ ಕಛೇರಿಯಲ್ಲಿ ನಡೆಯುತ್ತಿದ್ದು ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಇಲ್ಲಿ ಉಪಸ್ಥಿತರಿರುವರು. ನೊಂದಾವಣೆಯು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ನಡೆಯಲಿರುವುದು. ಸಮಾಜ ಬಾಂಧವರು ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರೀ ಹರಿಗುರು ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಪದಾಧಿಕಾರಿಯಾದ ಪಿ.ರಾಧಾಕೃಷ್ಣ ಭಕ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ: ಪಿ.ರಾಧಾಕೃಷ್ಣ ಭಕ್ತ-9448120395 ಹಾಗೂ ಹೆಚ್.ನಾಗೇಶ್ ಶೆಣೈ 9886774555 ಗಣೇಶ್ ಕಾಮತ್ 8105349277 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.