ನವದೆಹಲಿ: ಎರಡು ಮಹತ್ವದ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಗಂಗಾ ಶುದ್ಧೀಕರಣ ಯೋಜನೆಯ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ.
ಈ ಸಮಿತಿ ಬುಧವಾರ ತನ್ನ ಮೊತ್ತ ಮೊದಲ ಸಭೆಯನ್ನು ನಡೆಸಲಿದೆ.
ಜೇಟ್ಲಿ ಹೊರತುಪಡಿಸಿ ಸಚಿವರಾದ ವೆಂಕಯ್ಯ ನಾಯ್ಡು, ಬಿರೇಂದರ್ ಸಿಂಗ್, ಉಮಾ ಭಾರತಿ, ಮೇನಕಾ ಗಾಂಧಿ, ಸ್ಮೃತಿ ಇರಾನಿ, ರಾಜವರ್ಧನ್ ರಾಥೋಡ್ ಅವರುಗಳೂ ಈ ಸಮಿತಿಯ ಸದಸ್ಯರಾಗಿದ್ದಾರೆ.
ಯೋಜನೆಯ ಅಡಿಯಲ್ಲಿ ಮಾಡಲಾದ ಪ್ರಗತಿ, ಕಾರ್ಯಗಳ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ, ಯೋಜನೆಯ ತಲುಪುವಿಕೆಗೆ ಮಾಡಲಾಗುತ್ತಿರುವ ಅಭಿಯಾನಗಳ ಬಗ್ಗೆಯೂ ದೃಷ್ಟಿ ಹಾಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.