ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ಜೊತೆ ಸೌಹಾರ್ದತೆ ಮತ್ತು ಮಾತುಕತೆಗೆ ಅವಕಾಶ ಒದಗಿಸಿದ್ದರೂ, ಈಗ ಭಯೋತ್ಪಾದನೆ ನಿಗ್ರಹಿಸುವಲ್ಲಿ ಅದರ ಪ್ರಯತ್ನ ಮತ್ತು ಪ್ರಾಮಾಣಿಕತೆ ಬಗ್ಗೆ ಅನುಮಾನಗಳು ಹುಟ್ಟುತ್ತಿದೆ. ಇದರಿಂದ ಭಾರತ ಮತ್ತು ಪಾಕ್ ನಡುವೆ ಸೌಹಾರ್ದಯುತವಾಗಿ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಅವಕಾಶ ಕಳೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಪಾಕಿಸ್ಥಾನ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಮಾತುಕತೆಗೆ ಅವಕಾಶ ಕಲ್ಪಿಸಿದ್ದು, ಪಾಕ್ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆ ಹರಿಸುವ ಅವಕಾಶ ನೀಡಲಾಗಿತ್ತು. ಆದರೆ ಅವಕಾಶವನ್ನು ಪಾಕ್ ಕಳೆದುಕೊಳ್ಳುವ ಹೊಸ್ತಿಲಲ್ಲಿದ್ದು, ಅವಕಾಶ ಕಳೆದುಕೊಳ್ಳುವ ಮೊದಲೇ ಈ ವಿಚಾರದಲ್ಲಿ ಪಾಕಿಸ್ಥಾನ ಪ್ರಾಮಾಣಿಕತೆ ಪ್ರಯತ್ನ ನಡೆಸುವುದು ಸೂಕ್ತ. ಭಾರತದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಸಂಬಂಧಗಳನ್ನು ವೃದ್ಧಿಸಬೇಕೆಂದು ಹೇಳುವ ಮೂಲಕ ಭಯೋತ್ಪಾದನೆ ವಿರುದ್ಧ ಪಾಕ್ ಕ್ರಮಕೈಗೊಳ್ಳುವಂತೆ ಪರಿಕ್ಕರ್ ಚಾಟಿ ಬೀಸಿದ್ದಾರೆ.
ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳ ಕೈವಾಡವಿತ್ತು ಎಂದು ಶಂಕಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ಪಾಕಿಸ್ಥಾನ ಭಾರತ ತನ್ನ ಭದ್ರತಾ ನಲೆಯಲ್ಲಿ ಅವಕಾಶ ನೀಡಿತ್ತು. ಆದರೆ ಭಾರತ್ ಎನ್ ಐಎ ತಂಡಕ್ಕೆ ಪಾಕ್ ನಲ್ಲಿ ಅವಕಾಶ ನೀಡಲು ಕೇಳಿಕೊಂಡಿತ್ತು. ಆದರೆ ಪಾಕ್ ಇದಕ್ಕೆ ಪ್ರತಿಕ್ರಿಯೆ ನೀಡದೆ, ಭಯೋತ್ಪಾದನೆ ಬಗ್ಗೆ ತಮ್ಮ ನಿಲುವನ್ನು ಸಷ್ಟಪಡಿಸದಿರುವುದು ಭಾರತವನ್ನು ಕೆರಳಿಸಿದೆ. ಆದುದರಿಂದ ಭಾರತದೊಂದಿಗೆ ಮಾತುಕತೆಯ ಅವಕಾಶವನ್ನು ಪಾಕ್ ಕಳೆದುಕೊಳ್ಳದಿರಲಿ ಎಂದು ಪಾಕಿಸ್ಥಾನಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.