ನವದೆಹಲಿ: ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಏಮ್ಸ್ ಆಸ್ಪತ್ರೆಯಲ್ಲಿ ಸಹಾಯ ಬೇಕಾಗುವ ರೋಗಿಗಳಿಗೆ ನೆರವಾಗುವಂತೆ ’ಅಡಾಪ್ಟ್ ಎ ಪೇಷೆಂಟ್’ ಪಾಲಿಸಿಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಪ್ರತ್ರಿ ನಿತ್ಯ ಏಮ್ಸ್ ಆಸ್ಪತ್ರೆಯಲ್ಲಿ 8 ರಿಂದ 10 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಚಿಕಿತ್ಸೆಗೆ ಹಣಕಾಸಿನ ನೆರವಿಗಾಗಿ ಸಾಕಷ್ಟು ತೊಂದರೆಗೊಳಪಡುತ್ತಿರುತ್ತಾರೆ. ಅನೇಕರು ಆರ್ಥಿಕ ಕಾರಣಕ್ಕಾಗಿಯೇ ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಕೊಡಿಸಲಾಗದೆ ಹಾಗೆಯೇ ಹೋಗುವುದೂ ಇದೆ. ಇಂಥವರ ಚಿಕಿತ್ಸೆಗೆ ನೆರವಾಗುವಂತೆ ಸಾರ್ವಜನಿಕ ದೇಣಿಗೆ ಪಡೆಯಲು ’ಅಡಾಪ್ಟ್ ಎ ಪೇಷೆಂಟ್’ ಪಾಲಿಸಿಯನ್ನು ಜಾರಿಗೊಳಿಸಲಿದೆ.
ಏಮ್ಸ್ನ ರೋಗಿಗಳನ್ನು ದತ್ತು ಪಡೆಯುವ ಯೋಜನೆಯಿಂದ ಬಡ ರೋಗಿಗಳ ಚಿಕಿತ್ಸೆಗೆ ಸಾರ್ವಜನಿಕರು ಆಸ್ಪತ್ರೆಗೆ ದೇಣಿಗೆ ಕಟ್ಟಿದಲ್ಲಿ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಕಡಿಮೆಯಾಗಿಸಲಿದೆ. ಈ ಯೋಜನೆಯಿಂದ ಬಡ ರೋಗಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.