ನವದೆಹಲಿ: ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿ ಭವನದಲ್ಲಿ 100 ಮಹಿಳಾ ಸಾಧಕರಿಗೆ ಔತಣಕೂಟವನ್ನು ಏರ್ಪಡಿಸಿದ್ದರು.
ಈ ಸಾಧಕರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ದೇಶವ್ಯಾಪಿ ಫೇಸ್ಬುಕ್ ಸ್ಪರ್ಧೆಯ ಮೂಲಕ ಸಾರ್ವಜನಿಕ ನಾಮನಿರ್ದೇಶನದ ಮೂಲಕ ಆಯ್ಕೆ ಮಾಡಿದೆ.
ಭೋಪಾಲ್ ದುರಂತದ ಸಂತ್ರಸ್ಥೆ ರಶೀದಾ ಬಿ, ಮೆಮೊರಿ ಅಥ್ಲೇಟ್ ವೈಷ್ಣವಿ ಯೆರ್ಲಗಡ್ಡಾ, ಆಸಿಡ್ ದಾಳಿ ಸಂತ್ರಸ್ಥೆ ಸೊನಾಲಿ ಮುಖರ್ಜಿ ಸೇರಿದಂತೆ 100 ಮಂದಿ ಔತಣಕೂಟದಲ್ಲಿ ಭಾಗವಹಿಸಿದ್ದರು. ಸಚಿವ ಮೇನಕಾ ಗಾಂಧಿಯವರೂ ಉಪಸ್ಥಿತರಿದ್ದರು.
ಇದೊಂದು ಅದ್ಭುತ ಅನುಭವ, ಎಲ್ಲಾ ಸಾಧಕರನ್ನು ಭೇಟಿಯಾಗಿ ಪುಳಕಿತಗೊಂಡೆವು ಎಂದು ಸಾಧಕರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.