ಮಂಗಳೂರು : ಇಲ್ಲಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ.10 ಮಂಗಳವಾರದಿಂದ ನ.12 ನೇ ಗುರ್ರುವಾರದ ವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ.ಸಿ. ನಾಕ್ ತಿಳಿಸಿದ್ದಾರೆ.
ನ.10ರ ನರಕ ಚತುರ್ದಶಿಯಂದು ಪ್ರಾತಃಕಾಲ 5-30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ ಅಭಿಷೇಕ, ನ .11 ರಂದು ಪ್ರಾತಃಕಾಲ ಪವಮಾನ ಅಭಿಷೇಕ, ಸಾಯಂಕಾಲ ಲಕ್ಷ್ಮೀ ಪೂಜೆ, ೧೨ ರಂದು ಪ್ರಾತಃಕಾಲ ಪಂಚಾಮೃತ, ಸೀಯಾಳಾಭಿಷೇಕ ನಡೆಯಲಿದೆ. ಈ ಸಂದರ್ಭ ಶ್ರೀದೇವರಿಗೆ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅಲಂಕಾರ ಪೂಜೆ, ಸಾಯಂಕಾಲ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಭಜನಾ ಸಂಕೀರ್ತನೆ, ಸಾಯಂಕಾಲ 7-00ಕ್ಕೆ ಸಹಸ್ರ ದೀಪಾಲಂಕಾರ ಸಹಿತ ದೀಪಾರಾಧನೆ, ದೀಪೋತ್ಸವ ನಡೆಯಲಿದೆ ಎಂದವರು ಹೇಳಿದ್ದಾರೆ.
ನ.೧೦ರಂದು ಸಾಯಂಕಾಲ ಶಕ್ತಿನಗರದ ಶ್ರೀ ವಾಸುಕೀ ಕೀರ್ತನಾ ತಂಡದವರಿಂದ, ನ.11ರಂದು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನಾಮಂಡಳಿ, ನ.12ರಂದು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ನ. 12ರಂದು ಸಾಯಂಕಾಲ 7.00 ಕ್ಕೆ ಸಾಮೂಹಿಕ ಗೋಪೂಜೆ, ರಾತ್ರಿ 8-00ಕ್ಕೆ ಮಹಾಸೇವೆ – ರಂಗಪೂಜೆ , ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ನಡೆಯಲಿದೆ.
ನವೆಂಬರ ೨೩ರ ಉತ್ಥಾನ ದ್ವಾದಶಿ (ತುಳಸೀ ಪೂಜೆ) ವರೆಗೂ ಪ್ರತಿದಿನ ರಾತ್ರಿ 8-00ಕ್ಕೆ ಮಹಾಪೂಜೆಯ ಬಳಿಕ ಶ್ರೀದೇವರಿಗೆ ತುಳಸೀ ನಾಮಸಂಕೀರ್ತನೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.