News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th August 2026

×
Home About Us Advertise With s Contact Us

ಔರಂಗಜೇಬನ ವಿರುದ್ಧದ 30 ವರ್ಷಗಳ ಹೋರಾಟ:  ಮಾರ್ವಾರ್ ಅನ್ನು ಉಳಿಸಿದ  ದುರ್ಗಾದಾಸ್ ರಾಥೋಡ್ 

1678 ರಲ್ಲಿ ಮಹಾರಾಜ ಜಸ್ವಂತ್ ಸಿಂಗ್ ನಿಧನರಾದಾಗ ಮಾರ್ವಾರ್‌ನಲ್ಲಿ ದುರಂತವೊಂದು ಸಂಭವಿಸಿತು. ರಾಜನ ಸಾವಿನ ಅವಕಾಶವನ್ನು ಪಡೆದುಕೊಂಡ ಔರಂಗಜೇಬ್ ತಕ್ಷಣವೇ ಕಾರ್ಯಪ್ರವೃತ್ತನಾದ. ರಾಜ್ಯವು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಕಾಯದೆ, ಅವನು ಜೋಧ್‌ಪುರವನ್ನು ಆಕ್ರಮಿಸಿಕೊಂಡು ಮಾರ್ವಾರ್ ಅನ್ನು ಮೊಘಲ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಅವನಿಗೆ, ಮಾರ್ವಾರ್ ರಾಜ್ಯವಾಗಿರಲಿಲ್ಲ, ಅದು ವಶಪಡಿಸಿಕೊಂಡ ಪ್ರಾಂತ್ಯವಾಗಿತ್ತು. ಹಿಂದೂ ರಾಜರು ಸತ್ತಾಗಲೆಲ್ಲಾ ಔರಂಗಜೇಬ ಈ ರೀತಿಯ ಕ್ರೌರ್ಯ ಮಾಡುತ್ತಲೇ ಇದ್ದ, ಅವನು ರಾಜ್ಯವನ್ನು ವಶಪಡಿಸಿಕೊಳ್ಳುತ್ತಿದ್ದ, ದೇವಾಲಯಗಳನ್ನು ಮುಚ್ಚಿಸುತ್ತಿದ್ದ, ಜಿಜ್ಯಾ ತೆರಿಗೆಯನ್ನು ವಿಧಿಸುತ್ತಿದ್ದ ಮತ್ತು ಭೂಮಿಯನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದ. ಆದರೆ ಮಾರ್ವಾರ್‌ ವಿಷಯ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿ  ದುರ್ಗಾದಾಸ್ ರಾಥೋಡ್ ಇದ್ದರು.

ಯಾರಿದು ದುರ್ಗಾದಾಸ್ ರಾಥೋಡ್?

ಆತ ಮಾರ್ವಾರ್‌ನ ಶ್ರೇಷ್ಠ ರಕ್ಷಕನಾಗಿ ಹೊರಹೊಮ್ಮಿದ ವ್ಯಕ್ತಿ. ಆಗಸ್ಟ್ 13, 1638 ರಂದು ಸಾಲ್ವಾ ಗ್ರಾಮದಲ್ಲಿ ಜನಿಸಿದ ಅವರು, ಜಸ್ವಂತ್ ಸಿಂಗ್ ಅವರ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಆಸ್ಕರನ್ ರಾಥೋಡ್ ಅವರ ಮಗ. ರಾಜಮನೆತನದ ದರ್ಬಾರ್‌ನಲ್ಲಿ ಬೆಳೆದ ದುರ್ಗಾದಾಸ್‌ಗೆ ಚಿಕ್ಕ ವಯಸ್ಸಿನಿಂದಲೇ ಯುದ್ಧ, ರಾಜತಾಂತ್ರಿಕತೆ ಮತ್ತು ರಜಪೂತ ಗೌರವ ಸಂಹಿತೆಯಲ್ಲಿ ತರಬೇತಿ ನೀಡಲಾಯಿತು. 1658 ರ ಹೊತ್ತಿಗೆ, ಅವರು ಜಸ್ವಂತ್ ಸಿಂಗ್ ಅವರ ಅಡಿಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು, ಡೆಕ್ಕನ್‌ನಲ್ಲಿ ಮೊಘಲ್ ಅಭಿಯಾನಗಳ ವಿರುದ್ಧ ಭಾಗವಹಿಸುತ್ತಿದ್ದರು ಮತ್ತು ಧೈರ್ಯ ಮತ್ತು ನಾಯಕತ್ವಕ್ಕೆ ಖ್ಯಾತಿಯನ್ನು ಗಳಿಸಿದ್ದರು.

ಜಸ್ವಂತ್ ಸಿಂಗ್ ನಿಧನರಾದ ಕೆಲವು ತಿಂಗಳ ನಂತರ, ಅವರ ರಾಣಿ ರಾಜಕುಮಾರ ಅಜಿತ್ ಸಿಂಗ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗು ಮಾರ್ವಾರ್‌ನ ನಿಜವಾದ ರಾಜನಾಗಬೇಕಿತ್ತು. ಆದರೆ ಆ ಮುಗುವಿನ ಅಸ್ತಿತ್ವವೇ ಔರಂಗಜೇಬನ ಯೋಜನೆಗಳಿಗೆ ಬೆದರಿಕೆಯಾಗಿತ್ತು. ಹೀಗಾಗಿಯೇ ಔರಂಗಜೇಬ ಯುವ ರಾಜಕುಮಾರನನ್ನು ಮೊಘಲ್ ವಶಕ್ಕೆ ತೆಗೆದುಕೊಂಡು, ಇಸ್ಲಾಂಗೆ ಮತಾಂತರಿಸಿ, ಚಕ್ರವರ್ತಿಯ ಮೇಲ್ವಿಚಾರಣೆಯಲ್ಲಿ ಸಾಮ್ರಾಜ್ಯಶಾಹಿ ಜನಾನದಲ್ಲಿ ಬೆಳೆಸಿದರೆ ಮಾತ್ರ ರಾಜ್ಯವನ್ನು ನೀಡಲಾಗುವುದು ಎಂದು ಘೋಷಿಸಿದ. ರಜಪೂತರಿಗೆ, ಇದು ಗೌರವದ ವಿಷಯವಾಗಿತ್ತು. ಇದು ಅವರ ನಂಬಿಕೆ, ಗೌರವ ಮತ್ತು ಗುರುತಿನ ಮೇಲಿನ ಆಕ್ರಮಣವಾಗಿತ್ತು. ಮಾರ್ವಾರ್‌ನ ಭವಿಷ್ಯದ ರಾಜನನ್ನು ಮಾತು ಕಲಿಯುವ ಮೊದಲೇ ನಿಯಂತ್ರಿಸಿ ಆತನ ಮೂಲಭೂಥ ಸ್ವಾತಂತ್ರ್ಯವನ್ನು ನಂದಿಸಲು ಪ್ರಯತ್ನ ನಡೆದಿತ್ತು. ಆದರೆ ಈ ಬೆದರಿಕೆ ಬಗ್ಗದಿರಲು ನಿರಾಕರಿಸಿದ ದುರ್ಗಾದಾಸ್ ರಾಥೋಡ್ ಔರಂಗಜೇಬ್ ಮತ್ತು ರಾಜಕುಮಾರನ ನಡುವೆ ಗುರಾಣಿಯಾದರು. 1679 ರಲ್ಲಿ, ಅವರು ಅತ್ಯಂತ ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾದ ರಾಥೋರ್ ದಂಗೆಯನ್ನು ಪ್ರಾರಂಭಿಸಿದರು. 1679-1707, ಅವರು ಔರಂಗಜೇಬನ ಸಾಮ್ರಾಜ್ಯದ ಹೃದಯಭಾಗವಾದ ದೆಹಲಿಗೆ ಸವಾರಿ ಮಾಡಿದರು, ಅಲ್ಲಿ ವಿಧವೆಯರಾದ ರಾಣಿ ಮತ್ತು ಶಿಶು ರಾಜಕುಮಾರನನ್ನು ಮೊಘಲ್ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.

ಭಾರಿ ಭದ್ರತೆಯಿದ್ದ ಮಹಲಿನೊಳಗೆ, ಕೆಲಸದಾಕೆಯಾಗಿದ್ದ ಬಘೇಲಿ ರಾಣಿ ಅಪ್ರತಿಮ ತ್ಯಾಗವೊಂದನ್ನು ಮಾಡಿದಳು. ಅವಳು ರಾಜಕುಮಾರ ಅಜಿತ್ ಸಿಂಗ್ ಅನ್ನು ತನ್ನ ಸ್ವಂತ ಪುಟಾಣಿ ಮಗಳೊಂದಿಗೆ ವಿನಿಮಯ ಮಾಡಿಕೊಂಡಳು. ಅಜಿತ್‌ ಅನ್ನು ದುರ್ಗಾದಾಸ್‌ ಕೈಗಿತ್ತು, ತನ್ನ ಮಗಳನ್ನು ಅಜಿತ್‌ ಸಿಂಗ್‌ ಎಂಬಂತೆ ಬಿಂಬಿಸಿದಳು. ವಿಷಯ ತಿಳಿದ ನಂತರ ಅವಳನ್ನು ಮೊಘಲರು ಕೊಂದು ಹಾಕಿದರು. ಏತನ್ಮಧ್ಯೆ, ವಿಧವೆಯಾದ ರಾಣಿಯರು ತಮ್ಮ ಕೂದಲನ್ನು ಕತ್ತರಿಸಿ, ರಕ್ಷಾಕವಚವನ್ನು ಧರಿಸಿ, ಪುರುಷರಂತೆ ವೇಷ ಮರೆಸಿದರು. ರಾತ್ರಿಯಲ್ಲಿ, ದುರ್ಗಾದಾಸ್ ಅವರನ್ನು ದೆಹಲಿಯಿಂದ ಹೊರಗೆ ಕರೆದೊಯ್ದರು. ರಜಪೂತರು ಉಗ್ರ ಬೇಟೆಯನ್ನು ಪ್ರಾರಂಭಿಸುತ್ತಿದ್ದಾರೆಂದು ಮೊಘಲರು ಕಂಡುಕೊಂಡರು. ರಾಜಪೂತ ಯೋಧರು ದೆಹಲಿಯ ಬೀದಿಗಳಲ್ಲಿ ಸಾಯುವವರೆಗೂ ಹೋರಾಡಿದರು. 300 ಜನರಲ್ಲಿ ಕೇವಲ ಏಳು ಜನರು ಮಾತ್ರ ತಪ್ಪಿಸಿಕೊಂಡರು. ಉಳಿದವರು ಅಪ್ರತಿಮ ತ್ಯಾಗ ಮಾಡಿದರು. ತಪ್ಪಿಸಿಕೊಂಡವರಲ್ಲಿ ದುರ್ಗಾದಾಸ್ ಒಬ್ಬ, ಶಿಶು ಅಜಿತ್ ಸಿಂಗ್ ಅವರ ತೋಳುಗಳಲ್ಲಿ ಸುರಕ್ಷಿತವಾಗಿದ್ದ. ಔರಂಗಜೇಬನು ಕೋಪಗೊಂಡು, ಮಗುವನ್ನು ಹುಡುಕಲು ಸಾವಿರಾರು ಸೈನಿಕರ ಗೂಢಚಾರರನ್ನು ಮಾರ್ವಾರ್‌ನಾದ್ಯಂತ ಕಳುಹಿಸಿದ. ಅವರು ಮಾರ್ವಾರ್‌ನ ಹಳ್ಳಿಗಳನ್ನು ಸುಟ್ಟುಹಾಕಿದರು ಮತ್ತು ಜನರನ್ನು ಹಿಂಸಿಸಿದರು. ಆದರೂ ದುರ್ಗಾದಾಸ್ ಒಂದು ಹೆಜ್ಜೆ ಮುಂದೆ ಇಟ್ಟು ಮಗುವನ್ನು ರಕ್ಷಿಸಿದರು. ಅವರು ಅಜಿತ್ ಸಿಂಗ್ ಅನ್ನು ರಾಜಮನೆತನದ ಕೋಟೆಯಲ್ಲಿ ಮರೆಮಾಡಲಿಲ್ಲ. ಬದಲಿಗೆ ಅವನನ್ನು ಅರಾವಳಿ ಬೆಟ್ಟಗಳಿಗೆ ಕರೆದೊಯ್ದರು. ಅಲ್ಲಿ, ಭಿಲ್ ಬುಡಕಟ್ಟು ಜನಾಂಗದವರು ಮತ್ತು ಸಾಮಾನ್ಯ ಜನರ ಸಹಾಯದಿಂದ, ಅವರು ರಾಜಕುಮಾರನನ್ನು ಸುರಕ್ಷಿತವಾಗಿರಿಸಿದರು.

ಈ ಕಠಿಣ ಪರ್ವತಗಳಿಂದಲೇ, ದುರ್ಗಾದಾಸ್ ಮತ್ತು ಅವರ ರಜಪೂತ ಯೋಧರು ನಿರಂತರ ಗೆರಿಲ್ಲಾ ಅಭಿಯಾನವನ್ನು ನಡೆಸಿದರು. 28 ವರ್ಷಗಳ ಕಾಲ, ದುರ್ಗಾದಾಸ್ ಔರಂಗಜೇಬನೊಂದಿಗೆ ಹೋರಾಡಿದರು. ಅವರು ರಾತ್ರಿಯಲ್ಲಿ ಮೊಘಲ್ ಶಿಬಿರಗಳ ಮೇಲೆ ದಾಳಿ ಮಾಡಿ ಸೂರ್ಯೋದಯಕ್ಕೆ ಮುಂಚೆಯೇ ಕಣ್ಮರೆಯಾಗುತ್ತಿದ್ದರು ಮತ್ತು ತೆರಿಗೆ ಹಣ ದೆಹಲಿಗೆ ತಲುಪುವುದನ್ನು ನಿಲ್ಲಿಸಿದರು ಮತ್ತು ಮಾರ್ವಾರ್ ಜನರನ್ನು ಜಿಜ್ಯಾದಿಂದ ಮುಕ್ತಗೊಳಿಸಿದರು. ಮಾರ್ವಾರ್‌ಗೆ ಕಳುಹಿಸಲಾದ ಪ್ರತಿಯೊಬ್ಬ ಔರಂಗಜೇಬನ ಜನರಲ್ ಕೂಡ ಸೋಲಿಸಲ್ಪಟ್ಟನು. ವರ್ಷದಿಂದ ವರ್ಷಕ್ಕೆ, ಸಂಘರ್ಷವು ಮೊಘಲ್ ಸಂಪನ್ಮೂಲಗಳು ಮತ್ತು ನೈತಿಕತೆಯನ್ನು ಬರಿದುಮಾಡಿತು. ದುರ್ಗಾದಾಸ್ ರಜಪೂತರ ಪ್ರತಿರೋಧವನ್ನು ಒಟ್ಟುಗೂಡಿಸಿದರು, ಮಾರ್ವಾರ್ ಜನರ ನಿಷ್ಠೆಯನ್ನು ಕಾಪಾಡಿಕೊಂಡರು ಮತ್ತು ಸರಿಯಾದ ಉತ್ತರಾಧಿಕಾರಿ ಜೀವಂತವಾಗಿರುವುದನ್ನು ಖಚಿತಪಡಿಸಿಕೊಂಡರು.

ಅವರ ಹೋರಾಟವು ಕೇವಲ ಮಿಲಿಟರಿ ಅಲ್ಲ; ಅವುಗಳನ್ನು ಅಳಿಸಿಹಾಕಲು ನಿರ್ಧರಿಸಿದ ಚಕ್ರವರ್ತಿಯ ವಿರುದ್ಧ ಮಾರ್ವಾರ್‌ನ ಗುರುತು, ಗೌರವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ನಡೆದ ಹೋರಾಟವಾಗಿತ್ತು. ಆದರೆ ನಿದ್ರೆ ಕಳೆದುಕೊಂಡದ್ದು ಮಾತ್ರ ಔರಂಗಜೇಬ. ದುರ್ಗಾದಾಸ್‌ರನ್ನು ಬೆನ್ನಟ್ಟುತ್ತಾ ಅವನು ತನ್ನ ಸೈನ್ಯ, ಚಿನ್ನ ಮತ್ತು ಜೀವನವನ್ನು ವ್ಯರ್ಥ ಮಾಡಿದ. ಇದು ಕೇವಲ ಯುದ್ಧವಲ್ಲ. ಇದು ನಂಬಿಕೆಗಾಗಿ ನಡೆದ ಹೋರಾಟವಾಗಿತ್ತು. ಔರಂಗಜೇಬನು ಅಜಿತ್ ಸಿಂಗ್‌ಗೆ ಕುರಾನ್ ಓದಿಸಲು ಮುಂದಾಗಿದ್ದ. ಆದರೆ ದುರ್ಗಾದಾಸ್ ರಾಜಕುಮಾರ  ಗೀತೆ ಕಲಿಯುವುದನ್ನು ಖಚಿತಪಡಿಸಿಕೊಂಡ.

ಸುಮಾರು ಮೂರು ದಶಕಗಳ ನಂತರ, 1707 ರಲ್ಲಿ, ಔರಂಗಜೇಬ್ ನಿಧನನಾದ ಮತ್ತು ಮೊಘಲ್ ಸಾಮ್ರಾಜ್ಯ ಪತನವಾಯಿತು. ದುರ್ಗಾದಾಸ್ ದಾಳಿ ಮಾಡಿ ಮೊಘಲರನ್ನು ಮಾರ್ವಾರ್‌ನಿಂದ ಹೊರಹಾಕಿದರು ಮತ್ತು ಅಜಿತ್ ಸಿಂಗ್ ಅಂತಿಮವಾಗಿ ತನ್ನ ಪೂರ್ವಜರ ಸಿಂಹಾಸನಕ್ಕೆ ಮರಳಿದ.

ಔರಂಗಜೇಬ್ ನಿಯಂತ್ರಿಸಲು, ಮತಾಂತರಿಸಲು ಮತ್ತು ಅಳಿಸಲು ಪ್ರಯತ್ನಿಸಿದ ಮಗು ಮಾರ್ವಾರ್‌ನ ಮಹಾರಾಜನಾದ. ದುರ್ಗಾದಾಸ್ ರಾಥೋಡ್‌ಗೆ, ಗೆಲುವು ರಾಜಕೀಯಕ್ಕಿಂತ ಹೆಚ್ಚಿನದಾಗಿತ್ತು; ಸುಮಾರು ಮೂವತ್ತು ವರ್ಷಗಳ ತ್ಯಾಗ ಮತ್ತು ಭರವಸೆಯ ನೆರವೇರಿಕೆಯಾಗಿತ್ತು ಮತ್ತು ತಮ್ಮ ರಾಜ್ಯ, ನಂಬಿಕೆ ಅಥವಾ ಅವರ ಗುರುತನ್ನು ಬಿಟ್ಟುಕೊಡಲು ನಿರಾಕರಿಸಿದ ಜನರ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿತ್ತು. ಅಜಿತ್ ಸಿಂಗ್‌ಗೆ ದುರ್ಗಾದಾಸ್‌ ಹೇಳಿದ ಕೊನೆಯ ಮಾತುಗಳು ಹೀಗಿದ್ದವು: “ಮಾರ್ವಾರ್ ಈಗ ನಿಮ್ಮದು. ಮತ್ತೆ ಎಂದಿಗೂ ತಲೆಬಾಗಬೇಡ.”

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top