
ನವದೆಹಲಿ: ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಪುನಃಸ್ಥಾಪನೆ ಮಾಡಲು ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಯಾನವನ್ನು ನಡೆಸಿರುವ ಮತ್ತು 2025 ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ಮಾರಿಯಾ ಕೊರಿನಾ ಮಚಾದೊ ಅವರು ಭಾರತವನ್ನು ಹಾಡಿ ಹೊಗಳಿದ್ದಾರೆ.
ಭಾರತವನ್ನು “ಶ್ರೇಷ್ಠ ಪ್ರಜಾಪ್ರಭುತ್ವ” ಮತ್ತು ಇತರ ದೇಶಗಳಿಗೆ “ಮಾದರಿ” ಎಂದು ಶ್ಲಾಘಿಸಿರುವ ಅವರು, ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆ ಸಾಧಿಸಿದ ನಂತರ ಭಾರತವು “ಶ್ರೇಷ್ಠ ಮಿತ್ರ” ವಾಗಬಹುದು ಎಂದಿದ್ದಾರೆ.
ಪ್ರಜಾಪ್ರಭುತ್ವ ಪರ ಹೋರಾಟಗಳಿಂದಾಗಿ ಅವರು ಕಳೆದ 15 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದಾರೆ. ಬಹಿರಂಗಪಡಿಸದ ಸ್ಥಳದಿಂದ (ಅವರು ) ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
“ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಹಲವು ದೇಶಗಳಿಗೆ, ಹಲವು ತಲೆಮಾರುಗಳಿಂದ ಒಂದು ಉದಾಹರಣೆಯಾಗಿದೆ. ಭಾರತ ತುಂಬಾ ದೊಡ್ಡದಾಗಿದೆ. ಪ್ರಪಂಚದಾದ್ಯಂತದ ಅನೇಕ ಜನರು, ದೇಶಗಳು ಭಾರತವನ್ನು ಮಾದರಿಯಾಗಿ ನೋಡುತ್ತಿರುವುದರಿಂದ ಅದನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯೂ ಭಾರತದ ಜನರ ಮೇಲಿದೆ. ಪ್ರಜಾಪ್ರಭುತ್ವಗಳನ್ನು ಯಾವಾಗಲೂ ಬಲಪಡಿಸಬೇಕು ಮತ್ತು ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



