ನವದೆಹಲಿ: ಭಾರತದಲ್ಲಿ ಅರ್ಹತೆಯು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ಜಾತಿಗಳಿಗೆ ‘ಅನ್ಯಾಯ’ ಎಂದು ಟೀಕಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ಅಲ್ಲದೇ ಜಾತಿಗಣತಿಯನ್ನು ಪ್ರಚಾರ ಮಾಡುವ ಮೂಲಕ ಹಿಂದೂ ಸಮುದಾಯವನ್ನು ವಿಭಜಿಸುವ ತಮ್ಮ ಪ್ರಯತ್ನವನ್ನೂ ನಡೆಸಿದ್ದಾರೆ.
ಅರ್ಥಶಾಸ್ತ್ರಜ್ಞ ಸುಖದೇವ್ ಥೋರಟ್ ಅವರೊಂದಿಗಿನ ಪಾಡ್ಕಾಸ್ಟ್ನಲ್ಲಿ ರಾಹುಲ್ ಗೊಂದಲಮಯವಾದ ಹೇಳಿಕೆಗಳನ್ನು ನೀಡಿದ್ದಾರೆ. 15 ನಿಮಿಷಗಳ ಕಾರ್ಯಕ್ರಮದ ಸಮಯದಲ್ಲಿ, ರಾಹುಲ್ ಗಾಂಧಿ, “ನಾನು ಜಾತಿ ಜನಗಣತಿಯ ಬಗ್ಗೆ ಜನರೊಂದಿಗೆ ಚರ್ಚೆ ನಡೆಸಿದ್ದೇನೆ, ಜಾತಿ ಗಣತಿ ಎಂದರೆ ಸತ್ಯವನ್ನು ಬಹಿರಂಗಪಡಿಸುವುದು. ಬೇರೇನೂ ಇಲ್ಲ ಎಂದು ನಾನು ಪ್ರತಿಪಾದಿಸುತ್ತಲೇ ಬರುತ್ತಿದ್ದೇನೆ” ಎಂದಿದ್ದಾರೆ.
ಬಳಿಕ ಭಾರತೀಯ ಸಂವಿಧಾನದ ಬಗ್ಗೆ ಮತ್ತು ಭಾರತೀಯರ ಸಮಾನತೆಯನ್ನು ‘ಜಾತಿ ಜನಗಣತಿ’ಯ ಮೂಲಕ ಮಾತ್ರ ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರಿಸಿರುವ ಅವರು, ‘ಅರ್ಹತೆ’ಯ ಪರಿಕಲ್ಪನೆಯು ದೋಷಪೂರಿತವಾಗಿದೆ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಅಂತರ್ಗತವಾಗಿ ತಾರತಮ್ಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ. ಅರ್ಹತೆ ಅನ್ಯಾಯ ಮತ್ತು ಮೇಲ್ಜಾತಿಯ ನಿರೂಪಣೆ ಎಂದು ಅವರು ಹೇಳಿದ್ದಾರೆ.
“ನನ್ನ ಸಾಮಾಜಿಕ ಸ್ಥಾನಮಾನ ಮತ್ತು ನನ್ನ ಸಾಮರ್ಥ್ಯದ ನಡುವೆ ಗೊಂದಲ ಮೂಡಿಸುವ ಅರ್ಹತೆಯ ಪರಿಕಲ್ಪನೆ ಸಂಪೂರ್ಣವಾಗಿ ದೋಷಪೂರಿತವಾಗಿದೆ. ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಅಥವಾ ನಮ್ಮ ಅಧಿಕಾರಶಾಹಿ ಪ್ರವೇಶ ವ್ಯವಸ್ಥೆಗಳು ದಲಿತರು ಮತ್ತು ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ನ್ಯಾಯಯುತವಾಗಿವೆ ಎಂದು ಯಾರಾದರೂ ಹೇಳಿದರೆ ಅದು ಸಂಪೂರ್ಣ ತಪ್ಪು. ಏಕೆಂದರೆ ಅವರು ಸಾಂಸ್ಕೃತಿಕವಾಗಿ ಈ ಸಮುದಾಯಗಳೊಂದಿಗೆ ಸಂಪರ್ಕ ಹೊಂದಿಲ್ಲ. ಆದ್ದರಿಂದ ಇಡೀ ನಿರೂಪಣೆಯು ಮೇಲ್ಜಾತಿಯ ನಿರೂಪಣೆಯಾಗಿದೆ. ಅರ್ಹತೆಯ ಈ ಕಲ್ಪನೆಯು ವಾಸ್ತವವಾಗಿ ಅನ್ಯಾಯದ ಕಲ್ಪನೆಯಾಗಿದೆ” ಎಂದಿದ್ದಾರೆ.
ಯಾವುದೇ ಪುರಾವೆಗಳನ್ನು ಒದಗಿಸದೆ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಇತಿಹಾಸವನ್ನು ಅಳಿಸಿಹಾಕುತ್ತಿವೆ ಎಂದು ರಾಹುಲ್ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.