ನವದೆಹಲಿ: ಭಾರತ ಭೂಮಿ ಕಂಡ ಮಹಾನ್ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಫಾಲ್ಗುಣ ಮಾಸದ (ಫಾಲ್ಗುಣ ಶುಕ್ಲ ದ್ವಿತೀಯ) ಶುಕ್ಲ ಪಕ್ಷದ ಎರಡನೇ ದಿನದಂದು ಬಂಗಾಳ ಪ್ರಾಂತ್ಯದ ಕಮರ್ಪುಕೂರ್ ಗ್ರಾಮದಲ್ಲಿ ಜನಿಸಿದರು. ಇಂದು ಅವರ 189ನೇ ಜಯಂತಿ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ, ಅವರು 1836 ರ ಫೆಬ್ರವರಿ 18 ರಂದು ಜನಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದ್ದಾರೆ.
“ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ನಾನು ಅವರಿಗೆ ನಮಿಸುತ್ತೇನೆ. ಅವರು ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಸಾಕಾರಗೊಳಿಸಿದರು. ಅವರು ನ್ಯಾಯಯುತ ಮತ್ತು ವಿಭಜನೆಗಳಿಂದ ಮುಕ್ತವಾದ ಸಮಾಜದ ಕನಸು ಕಂಡಿದ್ದರು” ಎಂದು ಪ್ರಧಾನಿ ಹೇಳಿದರು.
ಪ್ರಧಾನ ಮಂತ್ರಿ ಅವರು ಕಳೆದ ವರ್ಷ ಶ್ರೀ ರಾಮಕೃಷ್ಣ ಪರಮಹಂಸರಿಗೆ ಗೌರವ ಸಲ್ಲಿಸಿದ ಭಾಷಣವನ್ನು ಹಂಚಿಕೊಂಡರು.
सभी देशवासियों की ओर से स्वामी रामकृष्ण परमहंस जी को उनकी जयंती पर शत-शत नमन। pic.twitter.com/CwaBq6qgUr
— Narendra Modi (@narendramodi) February 18, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.