
ನವದೆಹಲಿ: ಗಡಿಯಾಚೆಯಿಂದ ಭಾರತಕ್ಕೆ ಒಳನುಸುಳಿದ ಕೆಲವು ಭಯೋತ್ಪಾದಕರಲ್ಲಿ ಪಾಕಿಸ್ತಾನದ ನಿವೃತ್ತ ಸೈನಿಕರೂ ಇದ್ದಾರೆ ಎಂದು ಉತ್ತರ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಇಂದು ತಿಳಿಸಿದ್ದಾರೆ.
ರಾಜೌರಿ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಇಬ್ಬರು ಸೇನಾ ಕ್ಯಾಪ್ಟನ್ಗಳು ಸೇರಿದಂತೆ ಐವರು ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ದ್ವಿವೇದಿ, “ನಾವು ಎನ್ಕೌಂಟರ್ನಲ್ಲಿ ನಮ್ಮ ಐವರು ವೀರ ಸೈನಿಕರನ್ನು ಕಳೆದುಕೊಂಡಿದ್ದೇವೆ, ನಾವು ಇಬ್ಬರು ಭಯಾನಕ ಭಯೋತ್ಪಾದಕರನ್ನು ಸಹ ಸಂಹರಿಸಿದ್ದೇವೆ. ನಮ್ಮ ಯೋಧರು ಸುಸಜ್ಜಿತ ವಿದೇಶಿ ಭಯೋತ್ಪಾದಕರನ್ನು ಯಾವುದೇ ವೈಯಕ್ತಿಕ ಸುರಕ್ಷತೆಯ ಬಗ್ಗೆ ಚಿಂತೆ ಮಾಡದೆ ಎದುರಿಸಿದರು. ಇದು ಭಯೋತ್ಪಾದಕ ಪರಿಸರ ವ್ಯವಸ್ಥೆ ಮತ್ತು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ನಮ್ಮ ಅಂದಾಜಿನ ಪ್ರಕಾರ, ಈ ಪ್ರದೇಶದಲ್ಲಿ 20-25 ಭಯೋತ್ಪಾದಕರು ಇನ್ನೂ ಕಾರ್ಯಾಚರಿಸುತ್ತಿರಬಹುದು, ಸ್ಥಳೀಯರ ನೆರವಿನಿಂದ ಒಂದು ವರ್ಷದ ಅವಧಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಡ್ಯಾಂಗ್ರಿ, ಕಂಡಿ ಮತ್ತು ರಾಜೌರಿಯಲ್ಲಿ ಅಮಾಯಕ ನಾಗರಿಕರ ಹತ್ಯೆಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಮತ್ತು ಅವರ ನಿರ್ಮೂಲನೆ ಕಾರ್ಯಾಚರಣೆಯಲ್ಲಿ ತೊಡಗಿರುವ ಜಂಟಿ ಪಡೆಗಳ ತಂಡಕ್ಕೆ ಆದ್ಯತೆಯಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ದ್ವಿವೇದಿ ಹೇಳಿದರು.
#WATCH | On being asked if some of the terrorists could be soldiers of the Pakistan Army's Special Forces, Northern Army Commander Lt Gen Upendra Dwivedi says, "Some of the terrorists have been found to be retired soldiers…Pakistan wants to bring foreign terrorists here as… pic.twitter.com/rZVbj0N0aa
— ANI (@ANI) November 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


