ನವದೆಹಲಿ: ಭಾರತದ G20 ಅಧ್ಯಕ್ಷತೆಯಲ್ಲಿ G20 ವಿದೇಶಾಂಗ ಮಂತ್ರಿಗಳ ಸಭೆ ನಾಳೆ ಮಾರ್ಚ್ 2 ರಂದು ನಡೆಯಲಿದೆ. ಇದು ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ಸಚಿವರ ಸಭೆಯಾಗಿದೆ.
ನವದೆಹಲಿಯಲ್ಲಿ ನಡೆಯಲಿರುವ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ 40 ನಿಯೋಗಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಸಭೆಯಲ್ಲಿ 30 ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.
G20 ಅಧ್ಯಕ್ಷ ಸ್ಥಾನದಲ್ಲಿರುವ ಭಾರತದ ಆಯೋಜಿಸುತ್ತಿರುವ ವಿದೇಶಾಂಗ ಮಂತ್ರಿಗಳ ಅತಿ ದೊಡ್ಡ ಕೂಟಗಳಲ್ಲಿ ಇದೂ ಒಂದಾಗಿದೆ.
ಭೇಟಿ ನೀಡುವ ಗಣ್ಯರಿಗೆ ಇಂದು ಸಂಜೆ ಔತಣಕೂಟ ಏರ್ಪಡಿಸಲಾಗಿದೆ. G20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್, ಮಾರಿಷಸ್, ಟರ್ಕಿಯೆ, ಆಸ್ಟ್ರೇಲಿಯಾ, ನೈಜೀರಿಯಾ ಮತ್ತು ಮೆಕ್ಸಿಕೊ ಸೇರಿದಂತೆ ಅನೇಕ ರಾಷ್ಟ್ರಗಳ ವಿದೇಶಾಂಗ ಸಚಿವರು ನವದೆಹಲಿಗೆ ಆಗಮಿಸಿದ್ದಾರೆ.
ನಾಳೆ ನಡೆಯುವ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಎರಡು ಅಧಿವೇಶನಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಮೊದಲ ಅಧಿವೇಶನವು ಬಹುಪಕ್ಷೀಯತೆ ಮತ್ತು ಆಹಾರ ಮತ್ತು ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ, ಆದರೆ ಎರಡನೇ ಅಧಿವೇಶನವು ಭಯೋತ್ಪಾದನೆ ಮತ್ತು ಮಾದಕ ದ್ರವ್ಯಗಳು, ಜಾಗತಿಕ ಕೌಶಲ್ಯ ಮ್ಯಾಪಿಂಗ್ ಮತ್ತು ಜಾಗತಿಕ ಪ್ರತಿಭೆ ಪೂಲ್ಗಳ ಮೇಲೆ ಕೇಂದ್ರೀಕರಿಸುವುದು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ಬೆದರಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.
ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಸಭೆಯಲ್ಲಿ ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ಮತ್ತು ಜಪಾನ್ ಜಿ 20 ರೊಳಗೆ ಚರ್ಚೆಗಳು ಮತ್ತು ಸಮಾಲೋಚನೆಗಳ ವಿಷಯದಲ್ಲಿ ಉತ್ಕೃಷ್ಟವಾದ ಸಹಕಾರವನ್ನು ಹೊಂದಿವೆ ಮತ್ತು ಜಪಾನ್ ಭಾಗವಹಿಸುವಿಕೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ. ಜಪಾನಿನ ವಿದೇಶಾಂಗ ಸಚಿವರು ತಮ್ಮ ದೇಶದ ಕಾರ್ಯದ ಒತ್ತಡದ ಕಾರಣದಿಂದ ಬರಲು ಸಾಧ್ಯವಾಗದಿದ್ದರೂ, ಬರುವ ಜಪಾನ್ ನಿಯೋಗದೊಂದಿಗೆ ಸಮಾಲೋಚಿಸಿ ಭಾರತವು ಅತ್ಯಂತ ಸಕ್ರಿಯ ಭಾಗವಹಿಸುವಿಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
ಜೈಶಂಕರ್ ಅವರು ಚೀನೀ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರನ್ನು ಭೇಟಿ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಜೈಶಂಕರ್ ನಿನ್ನೆಯಿಂದ ಈಗಾಗಲೇ ತಮ್ಮ ಅನೇಕ ಸಹವರ್ತಿಗಳನ್ನು ಭೇಟಿಯಾಗಲು ಪ್ರಾರಂಭಿಸಿದ್ದಾರೆ . ಸಚಿವರು ಸಾಧ್ಯವಾದಷ್ಟು ಸಹೋದ್ಯೋಗಿಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.