ನವದೆಹಲಿ: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ 93 ಸಾವಿರ ಸೈನಿಕರೊಂದಿಗೆ ಪಾಕಿಸ್ಥಾನ ಭಾರತಕ್ಕೆ ಶರಣಾದ ಅವಿಸ್ಮರಣೀಯ ದಿನವಾದ ಡಿಸೆಂಬರ್ 16 ಅನ್ನು ʼವಿಜಯ್ ದಿವಸʼ ಆಗಿ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿ ಆರ್ ಚೌಧರಿ, ಭಾರತೀಯ ನೌಕಾ ಪಡೆ ಉಪ ಮುಖ್ಯಸ್ಥ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಅವರು ಇಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
1971ರ ಯುದ್ಧ ಪಾಕಿಸ್ಥಾನಕ್ಕೆ ಭಾರತದ ತಾಕತ್ತನ್ನು ತೋರಿಸಿಕೊಟ್ಟ ಯುದ್ಧ. ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ ಯುದ್ಧ. ಈ ದಿನ ಭಾರತೀಯ ಸೇನೆಯ ಸೈನಿಕರ ಪರಾಕ್ರಮವನ್ನು ದೇಶಾದ್ಯಂತ ಗಣ್ಯರು ಸ್ಮರಿಸುತ್ತಿದ್ದಾರೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವರು ಭಾರತೀಯ ಸೇನೆಯ ಹುತಾತ್ಮ ಯೋಧರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ.
Defence Minister Rajnath Singh lays wreath at National War Memorial on Vijay Diwas
Read @ANI Story | https://t.co/jaO0o3mxH2#RajnathSingh #VijayDiwas2022 #Bangladesh pic.twitter.com/13KyBpxlHW
— ANI Digital (@ani_digital) December 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.