ಹೈದರಾಬಾದ್: ದೀಪಾವಳಿಯನ್ನು ಆಚರಿಸುತ್ತಿದ್ದ ನೆರೆಯ ಹಿಂದೂ ಕುಟುಂಬವನ್ನು ನಿಂದಿಸಿದ ಮತ್ತು ರಂಗೋಲಿ, ದೀಪವನ್ನು ತುಳಿದು ಕೆಡಿಸಿದ ಆರೋಪದ ಮೇರೆಗೆ ಹೈದರಾಬಾದಿನ ಕ್ರಿಶ್ಚಿಯನ್ ಕುಟುಂಬವೊಂದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪಾರ್ಟ್ಮೆಂಟ್ನ ಸಾಮಾನ್ಯ ಜಾಗದಲ್ಲಿ ಸಾಂಪ್ರದಾಯಿಕ ರಂಗೋಲಿ ವಿನ್ಯಾಸಗಳನ್ನು ಬಿಡಿಸಿ ಅದರ ಮೇಲೆ ಹೂವು ಮತ್ತು ದೀಪಗಳನ್ನಿಟ್ಟು ಹಿಂದೂ ಕುಟುಂಬ ದೀಪಾವಳಿ ಆಚರಿಸಿದೆ. ಇದಕ್ಕೆ ಕ್ರಿಶ್ಚಿಯನ್ ಮಹಿಳೆ ಮತ್ತು ಆಕೆಯ ಮಕ್ಕಳು ಆಕ್ಷೇಪ ವ್ಯಕ್ತಪಡಿಸಿ ರಾದ್ಧಾಂತ ಮಾಡಿದ್ದಾರೆ. ಚಪ್ಪಲಿ ತೋರಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹೈದರಾಬಾದ್ನ ಚಿಕಪಲ್ಲಿ ಪ್ರದೇಶದ ಗೋಲ್ಕೊಂಡ ಕ್ರಾಸ್ ರಸ್ತೆಯಲ್ಲಿರುವ ಅರ್ಚನಾ ಅಪಾರ್ಟ್ಮೆಂಟ್ನಲ್ಲಿ ಅಕ್ಟೋಬರ್ 24 ರಂದು ಈ ಘಟನೆ ನಡೆದಿದೆ.
ವಿಡಿಯೋದಲ್ಲಿ, ಕ್ರಿಶ್ಚಿಯನ್ ಮಹಿಳೆ ಗೋನಾ ಶಾಲಿನಿ, ರಂಗೋಲಿ ಮತ್ತು ದೀಪಗಳನ್ನಿಟ್ಟ ಹುಡುಗಿಯರನ್ನು ಹೊಡೆಯುವುದಾಗಿ ಚಪ್ಪಲಿ ಹಿಡಿದು ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಆಕೆಯ ಇಬ್ಬರು ಪುತ್ರರು ಹಿಂದೂ ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದನ್ನೂ ಕಾಣಬಹುದಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಘಟನೆ ಬೆಳಕಿಗೆ ಬಂದ ನಂತರ, ಹಿಂದೂ ಸಂಘಟನೆಗಳು ಹೈದರಾಬಾದ್ನ ಅರ್ಚನಾ ಅಪಾರ್ಟ್ಮೆಂಟ್ನಲ್ಲಿ ಪ್ರತಿಭಟನೆ ನಡೆಸಿವೆ, ದೀಪಾವಳಿಯ ಸಾಂಪ್ರದಾಯಿಕ ಆಚರಣೆಯನ್ನು ವಿರೋಧಿಸುತ್ತಿರುವ ಕ್ರಿಶ್ಚಿಯನ್ನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇದರ ನಂತರ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ನಮ್ರತೆಗೆ ಅವಮಾನ) ಅಡಿಯಲ್ಲಿ ಬಂಧಿಸಿದ್ದಾರೆ. ಈ ಅಸಹಿಷ್ಣುತೆಯ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಪೊಲೀಸರು ಹಿಂದೂಗಳಿಗೆ ಭರವಸೆ ನೀಡಿದ್ದಾರೆ.
Forget bursting crackers, Hindus are being abused for lighting Diya’s 🪔 here in Hyderabad.#Hyderabad #Telangana #Diwali
— కౌశిక్ Kauśik (@KaushikUvaca) October 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.