ನವದೆಹಲಿ: ತಮಿಳುನಾಡಿನ ತಿರುಪ್ಪುರ್ ರೀತಿಯ 75 ಜವಳಿ ಕೇಂದ್ರಗಳನ್ನು ರಚಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವ ಪಿಯೂಶ್ ಗೋಯಲ್ ಅವರು ಹೇಳಿದ್ದಾರೆ.
ತಿರುಪ್ಪುರ್ ದೇಶಕ್ಕೆ ಹೆಮ್ಮೆ ತಂದಿದೆ ಮತ್ತು ವಾರ್ಷಿಕ 30,000 ಕೋಟಿ ಮೌಲ್ಯದ ಜವಳಿ ಉತ್ಪಾದನೆಗೆ ತವರೂರು ಎಂದು ಗೋಯಲ್ ಹೇಳಿದ್ದಾರೆ.
1985ರಲ್ಲಿ ತಿರುಪ್ಪೂರ್ 15 ಕೋಟಿ ರೂ.ಗಳ ಜವಳಿ ಉತ್ಪನ್ನಗಳನ್ನು ರಫ್ತು ಮಾಡುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಮಾರ್ಚ್ 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ತಿರುಪ್ಪೂರ್ನಿಂದ ಅಂದಾಜು ರಫ್ತುಗಳು 30,000 ಕೋಟಿ ರೂ.ಗಳಾಗಿವೆ.
ತಿರುಪ್ಪುರ್ ಕ್ಷೇತ್ರವು ಆರು ಲಕ್ಷ ಜನರಿಗೆ ನೇರ ಉದ್ಯೋಗವನ್ನು ಮತ್ತು ನಾಲ್ಕು ಲಕ್ಷ ಜನರಿಗೆ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ಹತ್ತು ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ, ಉದ್ಯೋಗಿಗಳಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳೆಯರು ಮತ್ತು ದುರ್ಬಲ ವರ್ಗದವರು ಎಂದಿದ್ದಾರೆ.
ಭಾರತದಾದ್ಯಂತ, ಸರಿಸುಮಾರು 3.5 ರಿಂದ 4 ಕೋಟಿ ಜನರು ಜವಳಿ ಕ್ಷೇತ್ರದ ಒಟ್ಟು ಮೌಲ್ಯ ಸರಪಳಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗೋಯಲ್ ಹೇಳಿದರು.
“ಕೃಷಿಯ ನಂತರ ಜವಳಿ ಎರಡನೇ ಅತಿ ದೊಡ್ಡ ಕೆಲಸ ಒದಗಿಸುವ ಸಂಸ್ಥೆಯಾಗಿದೆ. ಉದ್ಯಮದ ಗಾತ್ರ ಸುಮಾರು 10 ಲಕ್ಷ ಕೋಟಿ ರೂಪಾಯಿ. ರಫ್ತು ಸುಮಾರು 3.5 ಲಕ್ಷ ಕೋಟಿ ರೂಪಾಯಿ. ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಕೋಟಿ ರೂಪಾಯಿಯ ರಫ್ತು ಮಾಡುವ ಮೂಲಕ ಜವಳಿ ಕ್ಷೇತ್ರವು 20 ಲಕ್ಷ ಕೋಟಿ ಉದ್ಯಮಕ್ಕೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಪುನರುಚ್ಚರಿಸಿದರು”ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.