ನವದೆಹಲಿ: ಸೇನೆಗೆ ಸೇರುವ ಇಚ್ಛೆಯಿಂದ ರಾತ್ರಿ ಕೆಲಸದ ಸ್ಥಳದಿಂದ ಮನೆಗೆ 10ಕಿಮೀ ಓಡುವ ಉತ್ತರಾಖಂಡದ 19 ವರ್ಷದ ಹುಡುಗನ ಸ್ಪೂರ್ತಿದಾಯಕ ವೀಡಿಯೊ ಇಂದು ಸಾಕಷ್ಟು ವೈರಲ್ ಆಗಿದೆ. ನಿನ್ನೆಯವರೆಗೆ, ಉತ್ತರಾಖಂಡದ ಅಲ್ಮೋರಾದ ಹುಡುಗ ಪ್ರದೀಪ್ ಮೆಹ್ರಾ ಯಾರಿಗೂ ತಿಳಿದಿರಲಿಲ್ಲ, ಆದರೆ ಈಗ ಅವನು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾನೆ ಮತ್ತು ತನ್ನ ಧೈರ್ಯ ಮತ್ತು ಉತ್ಸಾಹದಿಂದ ಲಕ್ಷಾಂತರ ಹೃದಯಗಳನ್ನು ಗೆಲ್ಲುತ್ತಿದ್ದಾನೆ.
ಇದೀಗ, ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಅವರು ಯುವಕನ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಅವನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದು ನಿಜಕ್ಕೂ ಒಂದು ಅದ್ಭುತವಾದ ಸುದ್ದಿ.
ಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕ ವಿನೋದ್ ಕಪ್ರಿ ಅವರು ಈ ಯುವಕನೊಂದಿಗಿನ ತನ್ನ ಸಂಭಾಷಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಮೆಹ್ರಾ ಜೀವನ ಬದಲಾಗುವ ಹಂತ ತಲುಪಿದೆ.
ಈ ವಿಡಿಯೋ ನಿವೃತ್ತ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರ ಗಮನ ಸೆಳೆದಿದ್ದು, “ಅವನ ಜೋಶ್ ಶ್ಲಾಘನೀಯವಾಗಿದೆ ಮತ್ತು ಅವನ ಅರ್ಹತೆಯ ಆಧಾರದ ಮೇಲೆ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ಅವನಿಗೆ ಸಹಾಯ ಮಾಡಲು ನಾನು ಕುಮಾನ್ ರೆಜಿಮೆಂಟ್ನ ಕರ್ನಲ್, ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಕಲಿತಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ತನ್ನ ರೆಜಿಮೆಂಟ್ಗೆ ನೇಮಕಾತಿ ಪಡೆಯಲು ಯುವಕನಿಗೆ ತರಬೇತಿ ನೀಡಲು ಅಗತ್ಯವಾದ ಕಾರ್ಯ ಮಾಡುತ್ತಾರೆ. ಜೈ ಹಿಂದ್” ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.