ನವದೆಹಲಿ: ಅಫ್ಘಾನ್ ಜನರಿಗೆ ಆಹಾರಧಾನ್ಯಗಳು, ಕೋವಿಡ್-19 ಲಸಿಕೆಗಳು ಮತ್ತು ಅಗತ್ಯ ಜೀವ ಉಳಿಸುವ ಔಷಧಗಳನ್ನು ಒಳಗೊಂಡಿರುವ ಮಾನವೀಯ ನೆರವು ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಶುಕ್ರವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಕಳೆದ ಕೆಲವು ವಾರಗಳಲ್ಲಿ ಅಫ್ಘನ್ಗೆ 3.6 ಟನ್ ವೈದ್ಯಕೀಯ ನೆರವು ಮತ್ತು 5 ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಗೋಧಿಯನ್ನು ಖರೀದಿಸಲು ಮತ್ತು ಅದರ ಸಾಗಣೆಗೆ ವ್ಯವಸ್ಥೆ ಮಾಡಲು ಪ್ರಕ್ರಿಯೆಯು ನಡೆಯುತ್ತಿದೆ ಎಂದಿದ್ದಾರೆ.
ಉಕ್ರೇನ್ ಪರಿಸ್ಥಿತಿಯ ಕುರಿತು ಮಾತನಾಡಿದ ಬಾಗ್ಚಿ ಅವರು, ರಷ್ಯಾ ಮತ್ತು ಯುಎಸ್ ನಡುವೆ ನಡೆಯುತ್ತಿರುವ ಉನ್ನತ ಮಟ್ಟದ ಚರ್ಚೆ ಸೇರಿದಂತೆ ಉಕ್ರೇನ್ನಲ್ಲಿನ ಬೆಳವಣಿಗೆಗಳನ್ನು ಭಾರತವು ನಿಕಟವಾಗಿ ಅನುಸರಿಸುತ್ತಿದೆ. ಈ ಪ್ರದೇಶದಲ್ಲಿ ದೀರ್ಘಾವಧಿಯ ಸ್ಥಿರತೆ ಮತ್ತು ಶಾಂತಿಗಾಗಿ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಪರಿಸ್ಥಿತಿಯನ್ನು ಶಾಂತಿಯುತವಾಗಿ ಪರಿಹರಿಸಲು ಭಾರತ ಕರೆ ನೀಡುತ್ತದೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ಥಾನದ ನಡುವಿನ ಧಾರ್ಮಿಕ ಯಾತ್ರೆಯ ಕುರಿತು ಮಾತನಾಡಿದ ಬಾಗ್ಚಿ, ಭಾರತ ಮತ್ತು ಪಾಕಿಸ್ತಾನದ ನಡುವಿನ 1974 ಶಿಷ್ಟಾಚಾರದ ಅಡಿಯಲ್ಲಿ ಧಾರ್ಮಿಕ ದೇಗುಲಗಳಿಗೆ ನಿಯಮಿತವಾಗಿ ಭೇಟಿ ನೀಡಲಾಗುತ್ತಿದೆ. ಒಪ್ಪಿದ ದೇಗುಲಗಳ ಪಟ್ಟಿ ಮತ್ತು ಪ್ರಯಾಣದ ವಿಧಾನಗಳನ್ನು ವಿಸ್ತರಿಸಲು ಎರಡೂ ಕಡೆ ಆಸಕ್ತಿ ಇದೆ. ಈ ವಿಷಯದಲ್ಲಿ ಭಾರತವು ಸಕಾರಾತ್ಮಕ ವಿಧಾನವನ್ನು ಹೊಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.