ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 2021-22 ನೇ ಸಾಲಿನಲ್ಲಿ ಒಟ್ಟು 31 ಮಂದಿ ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 20 ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಒಬ್ಬರು ವಿಶೇಷ ಶಿಕ್ಷಕರನ್ನು ಒಳಗೊಂಡಂತೆ 11 ಶಿಕ್ಷಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಕ್ಷಕಿಯರಿಗೆ ‘ ಸಾವಿತ್ರಿ ಬಾಯಿ ಪುಲೆ’ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶಿಕ್ಷಕರಿಗೆ 10 ಸಾವಿರ, ಅವರ ಶಾಲೆಗಳ ಅಭಿವೃದ್ಧಿಗೆ 50 ಸಾವಿರ ನೀಡಿ ಅವರನ್ನು ಗೌರವಿಸಲಾಗುತ್ತದೆ.
ಈ ಪುರಸ್ಕಾರಕ್ಕೆ ಪ್ರಾಥಮಿಕ ಶಾಲೆಗಳ ಶಿಕ್ಷಕರಾದ ಟಿ.ಪಿ. ಉಮೇಶ– ಅಮೃತಾಪುರ, ಚಿತ್ರದುರ್ಗ, ಹೇಮಾ ಪಿ. ಅಂಗಡಿ– ಬೆಳಗಾವಿ ನಗರ. ವೈ.ಎ. ಚಂದ್ರು– ಲಿಂಗಸಗೂರು, ರಾಯಚೂರು, ಎಂ.ಪರಮೇಶ್ವರಯ್ಯ–ಮಾಲವಿ, ಬಳ್ಳಾರಿ. ಮಾರುತಿ ಭಜಂತ್ರಿ–ಚಳಮಟ್ಟಿ, ಧಾರವಾಡ. ಕೆ.ಎಸ್. ಪ್ರಕಾಶ್– ಹೊಸೂರು, ಶಿವಮೊಗ್ಗ. ಎಚ್.ಎ. ಶಿವಶಂಕರಯ್ಯ– ಚಿಕ್ಕನಾಯಕನಹಳ್ಳಿ, ತುಮಕೂರು. ಪಂಚಯ್ಯ ಹಿರೇಮಠ– ಹೊಸಹಳ್ಳಿ, ಗದಗ. ಸದಪ್ಪ ಏಳಗಂಟಿ– ಹೆಗ್ಗೂರ, ಬಾಗಲಕೋಟೆ. ಡಿ. ಗೋಪಾಲಸ್ವಾಮಿ– ಇಕ್ಕಡಹಳ್ಳಿ, ಚಾಮರಾಜನಗರ. ಎಸ್. ಕೃಷ್ಣಪ್ಪ–ರಾಮನಗರ. ಜಿ.ಎಸ್. ಉಂಕಿ– ಗುಡ್ಡದ ಚನ್ನಾಪುರ, ಹಾವೇರಿ. ವಿ. ಉಷಾ– ಪೆಂಡ್ಲಿವಾರಹಳ್ಳಿ– ಚಿಕ್ಕಬಳ್ಳಾಪುರ. ಬಿ.ಎ. ಜಮುನಾ– ಹೆರೋಹಳ್ಳಿ, ಬೆಂಗಳೂರು ಉತ್ತರ. ಎಡ್ವರ್ಡ್ ಡಿಸೋಜಾ– ಕಟ್ಟದಬೈಲು, ದಕ್ಷಿಣ ಕನ್ನಡ. ವಿ.ಜಿ. ವೆಂಕಟಾಚಲಯ್ಯ– ಗೋವಿಂದಪುರ, ಬೆಂಗಳೂರು ಗ್ರಾಮಾಂತರ. ಮಹಾದೇವ–ಮುದುಕಿ ಚಿಕ್ಕನಹುಂಡಿ, ಮೈಸೂರು. ಸ್ವಾಮಿ–ಅಲಕೆರೆ, ಮಂಡ್ಯ. ಎಚ್.ಎಂ. ಮಂಗಳ–ಕಬ್ಬಳ, ದಾವಣಗೆರೆ. ನಾರಾಯಣಪ್ಪ ಚಿತ್ರಗಾರ–ಮಾದಿನೂರು, ಕೊಪ್ಪಳ ಭಾಜನರಾಗಿದ್ದಾರೆ. ಹಾಗೆಯೇ ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ ಕಿಶನ್ ರಾವ್– ಹನುಮಸಾಗರ, ಕೊಪ್ಪಳ. ಆರ್.ಯು. ನವೀನ್ಕುಮಾರ್– ಅಲೀಪುರ, ಚಿಕ್ಕಬಳ್ಳಾಪುರ. ಜಿ. ರಂಗನಾಥ–ರೇಖಲಗೆರೆ, ಚಿತ್ರದುರ್ಗ. ಎಚ್.ಎನ್. ಶಿವಕುಮಾರ್– ಕಳಸ, ಚಿಕ್ಕಮಗಳೂರು. ಶಿವಲಿಂಗ– ಸಂತಪುರ, ಬೀದರ್. ಸದಾಶಿವಯ್ಯ ಎಸ್. ಪಲ್ಲೇದ– ಕುಶಾಲನಗರ, ಕೊಡಗು. ಶ್ರೀಕಾಂತ ರಾಮ ಪಟಗಾರ– ಕೋಣಂದೂರು, ಶಿವಮೊಗ್ಗ. ಎಂ.ಎಸ್. ನಟರಾಜು– ಹೆಗ್ಗೆರೆ, ತುಮಕೂರು. ಸಪನಾ ಅನಿಗೋಳ–ಮಹಾಲಿಂಗಪುರ, ಬಾಗಲಕೋಟೆ. ಬಸವರಾಜ ಅವಟಿ–ಪೀರಾಪುರ, ವಿಜಯಪುರ. ಕೆ. ಸಂಗೀತಾ– ಜಿ.ಬಿ. ಸರಗೂರು, ಹೆಗ್ಗಡದೇವನ ಕೋಟೆ, ಮೈಸೂರು ಅವರು ಭಾಜನರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.